Advertisement
ಆದರೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಏಳು ಮಂದಿ ಮೀನುಗಾರರ ಮನೆಗಳಲ್ಲಿ ಮಾತ್ರ ಮೌನ ಆವರಿಸಿದೆ.
ಊಹಾಪೋಹದಿಂದ ಗೊಂದಲ
ಒಂದು ಸಲ ಅಪಹರಿಸಲಾಗಿದೆ, ಮತ್ತೂಂದು ಸಲ ಯುದ್ಧ ನೌಕೆ ಢಿಕ್ಕಿ ಹೊಡೆದಿದೆ ಎನ್ನಲಾಯಿತು. ಅನಂತರ ನಾಪತ್ತೆಯಾದವರ ಮೊಬೈಲಿಗೆ ಕರೆ ಹೋಯಿತು; ಇಬ್ಬರ ಪೋನ್ ರಿಂಗಣಿಸಿತು ಎನ್ನುವುದಾಗಿ ಸುದ್ದಿಯಾಯಿತು. ಮತ್ತೂಮ್ಮೆ ಸಮುದ್ರದಡಿಯಲ್ಲಿ ಬೋಟ್ ಮಾದರಿಯ ವಸ್ತು ಪತ್ತೆಯಾಗಿದೆ ಎಂದೂ ಕೆಲವು ದಿನಗಳ ಬಳಿಕ ಅದು ಕಲ್ಲು ಎಂದೂ ಹೇಳಲಾಯಿತು. ಶ್ರೀಲಂಕದಲ್ಲಿ ಇದ್ದಾರೆ, ದುಬಾೖಯಲ್ಲಿ ಇರುವ ಸಾಧ್ಯತೆ ಇದೆ ಎಂಬೆಲ್ಲ ಊಹಾಪೋಹಗಳು ನಮಗೆ ಗೊಂದಲಕ್ಕೆ ಕಾರಣವಾಗಿತ್ತು ಎಂದು ಮೀನುಗಾರರ ಮನೆಯವರು ತಿಳಿಸುತ್ತಾರೆ.
ಚುನಾವಣೆಯೊಳಗೆ ಸುಳಿವು ನೀಡಿ
ಚುನಾವಣೆ ದಿನಾಂಕದ ಒಳಗೆ ನಮ್ಮವರ ಸುಳಿವು ಸಿಗುವಂತೆ ಮಾಡಬೇಕು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ. ಮುಂದೆ ಎರಡೂ ಪಕ್ಷಗಳ ಅಭ್ಯರ್ಥಿಗಳಿಗೂ ಮನವಿ ನೀಡಿ ಆಗ್ರಹಿಸುತ್ತೇವೆ ಎಂದು ನಾಪತ್ತೆಯಾದ ಮೀನುಗಾರ ಕುಮಟಾದ ಲಕ್ಷ್ಮಣ ಅವರ ಸಹೋದರ ಗೊವಿಂದ ಹರಿಕಂತ್ರ ತಿಳಿಸಿದ್ದಾರೆ.
Related Articles
– ಗಣಪತಿ ಮಾಂಗ್ರೆ ಕಾರವಾರ,
ಮೀನುಗಾರ ಮುಖಂಡ
Advertisement