Advertisement

Lok Sabha Polls: ಬಿಜೆಪಿ ಜತೆಗೆ ನಟ ಶರತ್‌ ಪಕ್ಷ ಎಐಎಸ್‌ಎಂಕೆ ವಿಲೀನ

10:21 PM Mar 12, 2024 | Team Udayavani |

ಚೆನ್ನೈ: ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿರುವಂತೆಯೇ ತಮಿಳು ನಟ ಆರ್‌. ಶರತ್‌ ಕುಮಾರ್‌ ಅವರ ಪಕ್ಷ ಅಖೀಲ ಇಂಡಿಯಾ ಸಮತುವಾ ಮಕ್ಕಳ್‌ ಕಚ್ಚಿ (ಎಐಎಸ್‌ಎಂಕೆ) ಬಿಜೆಪಿ ಜತೆಗೆ ಮಂಗಳವಾರ ವಿಲೀನವಾಗಿದೆ.

Advertisement

ಬಿಜೆಪಿ ತಮಿಳುನಾಡು ಘಟಕದ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ನೇತೃತ್ವದಲಿ ಪಕ್ಷ ವಿಲೀನಗೊಂಡಿದೆ. ಆ ಬಳಿಕ ಮಾತನಾಡಿರುವ ಶರತ್‌ ಕುಮಾರ್‌, “ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೂಮ್ಮೆ ರಾಷ್ಟ್ರದ ಚುಕ್ಕಾಣಿ ಹಿಡಿದು ದೇಶದ ಆರ್ಥಿಕತೆಯನ್ನು ಸಬಲಗೊಳಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ಲೋಕಸಭೆ ಚುನಾವಣೆಯಿಂದ ಹಿಡಿದು, 2026ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಿರಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next