Advertisement

Lok Sabha Election: ಮೋದಿ ಕೈ ಬಲಪಡಿಸಲು ಬಿಜೆಪಿಗೆ ಮತ ಹಾಕಿ

09:19 AM Mar 30, 2024 | Team Udayavani |

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗಾಯತ್ರಿ ಸಿದ್ದೇಶ್ವರ್‌ ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರಿಗೆ ಮತ್ತೂಮ್ಮೆ ಕೇಂದ್ರದಲ್ಲಿ ಅಧಿಕಾರ ನಡೆಸಲು ಕೈ ಬಲಪಡಿಸಬೇಕು ಎಂದು ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಮನವಿ ಮಾಡಿದರು.

Advertisement

ಶುಕ್ರವಾರ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ ಪರ ಪ್ರಚಾರ ನಡೆಸಿದರು. ನಮ್ಮ ಎಲ್ಲರ ಗುರಿ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡುವುದಾಗಿದೆ. ದೇಶ ಮೋದಿ ಅವರ ಕೈಯಲ್ಲಿ ಇದ್ದರೆ ಎಲ್ಲರೂ ಸುರಕ್ಷಿತವಾಗಿ ಇರಬಹುದು. ಹಾಗಾಗಿ ನಾವೆಲ್ಲ ಸೇರಿ ಗಾಯತ್ರಿ ಸಿದ್ದೇಶ್ವರ್‌ ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸುವ ಮೂಲಕ ಕೇಂದ್ರದ ಅಧಿ ಕಾರ ಮತ್ತೂಮ್ಮೆ ನರೇಂದ್ರ ಮೋದಿ ಅವರ ಕೈಗೆ ಕೊಡಬೇಕು ಎಂದು ಮನವಿ ಮಾಡಿದರು.

ದಾವಣಗೆರೆ ಜಿಲ್ಲೆಯಲ್ಲಿ ಸ್ಮಾರ್ಟ್‌ ಸಿಟಿ ಸೇರಿದಂತೆ ಸಾಕಷ್ಟು ಆಯಾಮದಲ್ಲಿ ಅಭಿವೃದ್ಧಿಗೆ ಜಿ.ಎಂ. ಸಿದ್ದೇಶ್ವರ್‌ ಅವರ ಕೊಡುಗೆ ಇದೆ. ಈ ಬಾರಿ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್‌ ಅವರನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳುಹಿಸಿದರೆ ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಪ್ರತಿಯೊಬ್ಬ ಕಾರ್ಯಕರ್ತರೂ ತಾವೇ ಅಭ್ಯರ್ಥಿ ಎಂದು ಗಾಯತ್ರಿ ಸಿದ್ದೇಶ್ವರ್‌ ಅವರ ಗೆಲುವಿಗೆ ಶ್ರಮಿಸಬೇಕು. ನಾವು ಈಗಾಗಲೇ ಗೆದ್ದಿದ್ದೇವೆ. ಈಗ ಏನಿದ್ದರೂ ಹೆಚ್ಚಿನ ಅಂತರದ ಲೀಡ್‌ಗಾಗಿ ಪ್ರಯತ್ನ ಪಡಬೇಕು ಎಂದು ತಿಳಿಸಿದರು.

ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್‌ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ನನಗೆ ಶಕ್ತಿ ತುಂಬಿದ್ದೀರಿ. ಕಾಂಗ್ರೆಸ್‌ನ ಪುಕ್ಕಟೆ ಭರವಸೆಗಳಿಗೆ ಮರುಳಾಗದೆ ದೇಶ ಮತ್ತು ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ನನ್ನ ತಾಯಿ ಸಮಾನರಾದ ಗಾಯತ್ರಿ ಸಿದ್ದೇಶ್ವರ್‌ ಅವರಿಗೆ ಹೆಚ್ಚಿನ ಮತಚಲಾಯಿಸಿ ಗೆಲ್ಲಿಸಿ ದೆಹಲಿಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಮಾಜಿ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ ಮಾತನಾಡಿ, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿರುವುದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃರ್ಷಿತ್ವದ ಆಡಳಿತ. ಕಾಂಗ್ರೆಸ್‌ 65 ವರ್ಷ ಮಾಡದ ಅಭಿವೃದ್ಧಿಯನ್ನ ನರೇಂದ್ರ ಮೋದಿ ಅವರು 10 ವರ್ಷದಲ್ಲಿ ಮಾಡಿ ತೋರಿಸಿದ್ದಾರೆ. ಗಾಯತ್ರಿ ಸಿದ್ದೇಶ್ವರ್‌ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡಬೇಕು ಎಂದರು.

Advertisement

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ ಮಾತನಾಡಿ, ಹಿರಿಯರಾದ ಎಸ್‌.ಎ. ರವೀಂದ್ರನಾಥ್‌ ಅವರು ನಮಗೆ ಮಾರ್ಗದರ್ಶಕರು. ಅವರ ನೇತೃತ್ವದಲ್ಲಿ ಚುನಾವಣೆ ನಡೆಸುತ್ತಿದ್ದು, ಈಗಾಗಲೇ ನಾವು ಗೆದ್ದಿದ್ದೇವೆ. ಚುನಾವಣೆ ಫಲಿತಾಂಶದ ದಿನ ನಾವು ಗೆದ್ದು, ಬರೀ ಅಡುಗೆ ಮಾಡುವುದಕ್ಕೆ ಅಲ್ಲ. ಅಧಿಕಾರವನ್ನೂ ಮಾಡುತ್ತೇವೆ ಎಂದು ತೋರಿ ಸುತ್ತೇವೆ ಎಂದರು.

ಹಳೇಬಾತಿ, ಗುಡ್ಡದ ಕ್ಯಾಂಪ್‌, ನೀಲಾನಹಳ್ಳಿ, ಆವರಗೊಳ್ಳ, ಬೂದಿಹಾಳ್‌, ಕಡ್ಲೇಬಾಳು, ಓಬಜ್ಜಿಹಳ್ಳಿ, ಮಾಗಾನಹಳ್ಳಿ, ಅರಸಾಪುರ, ಚಿತ್ತನಹಳ್ಳಿ, ಬಿ.ಕಲಪನಹಳ್ಳಿ, ಎಲೆಬೇತೂರು, ಪುಟಗನಾಳ್‌, ಕಾಡಜ್ಜಿ, ನಾಗರಕಟ್ಟೆ, ರಾಂಪುರ, ಮಲ್ಲಾಪುರ, ಲಿಂಗದಹಳ್ಳಿ ಸೇರಿದಂತೆ 15 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರಚಾರ ನಡೆಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್‌.ರಾಜಶೇಖರ್‌ ನಾಗಪ್ಪ, ಜಿ.ಎಲ್‌. ರಾಜೀವ್‌, ಕಡ್ಲೇಬಾಳು ಧನಂಜಯ್‌, ಶಿವಕುಮಾರ್‌, ಬಿ.ಎಂ. ಸತೀಶ್‌, ದೊಗ್ಗಳ್ಳಿ ವೀರೇಶ್‌, ಸಿದ್ದೇಶ್‌, ಬಿ.ಎಸ್‌. ಜಗದೀಶ್‌, ಸಂಗನಗೌಡರು, ಗ್ಯಾರಳ್ಳಿ ಶಿವಣ್ಣ, ಗಣೇಶ್‌ ಗೌಡರು, ಮಹಾನಗರ ಪಾಲಿಕೆ ಸದಸ್ಯರು ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

ಮಠಾಧೀಶರ ಆಶೀರ್ವಾದ ಪಡೆದ ಗಾಯತ್ರಿ ಸಿದ್ದೇಶ್ವರ್‌

ದಾವಣಗೆರೆ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ ದಾವಣಗೆರೆ ನಗರದ ವಿವಿಧ ಮಠಗಳಿಗೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು.

ದಾವಣಗೆರೆ ನಗರದ ವಿರಕ್ತ ಮಠಕ್ಕೆ ಭೇಟಿ ನೀಡಿದ ಅವರು ಶ್ರೀಬಸವಪ್ರಭು ಸ್ವಾಮೀಜಿ ಅವರಿಗೆ ಗೌರವ ಸಲ್ಲಿಸಿ, ಆಶೀರ್ವಾದ ಪಡೆದರು.

ಶ್ರೀಶೈಲ ಗುರುಪೀಠಕ್ಕೆ ಭೇಟಿ ನೀಡಿ ಜಗದ್ಗುರುಗಳಾದ ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಗೌರವ ಸಲ್ಲಿಸಿ, ಆಶೀರ್ವಾದ ಪಡೆದರು. ಮಾಜಿ ಮೇಯರ್‌ ಬಿ.ಜಿ.ಅಜಯ್‌ ಕುಮಾರ್‌ ನಿವಾಸಕ್ಕೆ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿದರು.

ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಬಿಜೆಪಿ ಮುಖಂಡ ರಾದ ಜಿ.ಎಸ್‌.ಅನಿತ್‌ ಕುಮಾರ್‌, ಜಿ.ಎಸ್‌.ಅಶ್ವಿ‌ನಿ, ಜಿ.ಎಲ್‌. ರಾಜೀವ್‌, ಗೌತಮ್‌ ಜೈನ್‌, ಡಾ| ಸಿ.ಆರ್‌. ನಾಸೀರ್‌ ಅಹಮದ್‌ ಇತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next