Advertisement
ಹಿರಿಯ ಸಿವಿಲ್ ನ್ಯಾಯಾಧೀಶ ಎಸ್. ಶರಣ್ ಹಾಗೂ ವಕೀಲರಾದ ಎನ್.ಹೆಚ್. ಶಾಂತವೀರಪ್ಪ ಮತ್ತು ಬಿ.ಎಸ್.ಪ್ರಭಾಕರ್ ದಂಪತಿಗಳಿಗೆ ಪ್ರೋತ್ಸಾಹಿಸಿದವರು.
Related Articles
Advertisement
ಬಸವರಾಜ್ ಹಾಗೂ ವಿಜಯಮ್ಮ ದಂಪತಿಗಳು 2021ರಲ್ಲಿ ನ್ಯಾಯಾಲಯಕ್ಕೆ ಬಂದಿದ್ದು, ಮೊದಲಿಗೆ ಬಸವರಾಜ್ ಹಾಗೂ ವಿಜಯಮ್ಮ ನಡುವೆ ಉಂಟಾದ ಸಮಸ್ಯೆಯಿಂದ ಹೆಂಡತಿ ವಿಜಯಮ್ಮ ಬಿಟ್ಟುಹೋಗಿದ್ದು, ವಿಜಯಮ್ಮ ಬೇಕು ಎನ್ನುವ ಅರ್ಜಿಯನ್ನು ಸಲ್ಲಿಸಿದ್ದರು. ನಂತರ ವಿಜಯಮ್ಮ ಜೀವನ ಅಂಶ ಕೋರಿ ನ್ಯಾಯಾಲಯಕ್ಕೆ 2021 ರಲ್ಲಿ ಅರ್ಜಿ ಸಲ್ಲಿಸಿದರು.
ತದನಂತರ ಬಸವರಾಜ್, ವಿಜಯಮ್ಮ ವಿರುದ್ಧ ವಿವಾಹ ವಿಚ್ಛೇದನಗೊಳಿಸುವಂತೆ ಕೋರಿ 2023ರಲ್ಲಿ ವಿವಾಹ ವಿಚ್ಛೇದನಕ್ಕೆ ವಿವಾಹ ಕಾಯ್ದೆ 1955 ಕಲಂ 13 ರನ್ವಯ ಅರ್ಜಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಹೊಳಲ್ಕೆರೆ ನ್ಯಾಯಾಲಯದಲ್ಲಿ ಹಲವಾರು ಬಾರಿ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ಮಧ್ಯಸ್ಥಿಕೆಯಿಂದಾಗಿ ದಂಪತಿ ಜೀವನ ಮುಂದುವರಿಸಬೇಕು ಎನ್ನುವ ತೀರ್ಮಾನಕ್ಕೆ ಬಂದು ಶನಿವಾರದ ಲೋಕದಲತ್ ನಲ್ಲಿ ಪುನಃ ವಿವಾಹವನ್ನು ಸ್ಥಾಪಿಸಿಕೊಳ್ಳುವುದರ ಮೂಲಕ ಹೊಸ ಜೀವನ ಆರಂಭಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ರಾಜಿ ಮಾಡಿಕೊಂಡಿದ್ದಾರೆ.
ಇದೆ ಸಮಯದಲ್ಲಿ ಇವರ ನಡುವೆ ಇದ್ದ ಇತರೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡಿದ್ದು, ಮಧ್ಯಸ್ಥಿಕೆ ವಕೀಲರಾದ ಪ್ರೇಮಾ, ವಕೀಲರ ಸಂಘದ ಅಧ್ಯಕ್ಷ ಎಲ್.ಕೆ.ಶಿವಕುಮಾರ್ ಸೇರಿದಂತೆ ಹಲವಾರು ವಕೀಲರ ಸಂಘದ ಸದಸ್ಯರು ಇದ್ದರು.