Advertisement

ಆ.14ಕ್ಕೆಮೆಗಾ ಲೋಕ್‌ ಅದಾಲತ್‌

06:17 PM Jul 25, 2021 | Team Udayavani |

ಯಳಂದೂರು: ಪಟ್ಟಣದ ಸಿವಿಲ್‌ ನ್ಯಾಯಾಲಯದಲ್ಲಿ ಆ. 14ರಂದು ಮೆಗಾ ಲೋಕ್‌ ಅದಾಲತ್‌ ಹಮ್ಮಿಕೊಳ್ಳಲಾಗಿದೆ ಎಂದು ಸಿವಿಲ್‌ ನ್ಯಾಯಾಧೀಶ ಎನ್‌. ಶರತ್‌ಚಂದ್ರ  ತಿಳಿಸಿದರು.

Advertisement

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಹಾರ್‌ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಂಡರೆನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ವಾಪಸ್‌ನೀಡಲಾಗುವುದು. ಇಲ್ಲಿ ಇತ್ಯರ್ಥಗೊಂಡ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ.ಕಕ್ಷಿದಾರರು ಒಪ್ಪಿ ವ್ಯಾಜ್ಯ ಇತ್ಯರ್ಥಪಡಿಸಿಕೊಂಡರೆ ಬಾಂಧವ್ಯವೂ ಉಳಿದು ವಿವಾದ ಇತ್ಯರ್ಥಗೊಳ್ಳುತ್ತದೆ.ಸೌಹಾರ್ದತೆಯ ವಾತಾವರಣ ನಿರ್ಮಾಣವಾಗುತ್ತದೆ.ಶೀಘ್ರ ನ್ಯಾಯವೂ ಸಿಕ್ಕಂತಾಗುತ್ತದೆ.

ಈ ನಿಗದಿತದಿನಾಂಕಕ್ಕೂ ಮುಂಚೆಯೂ ಅರ್ಜಿ ಸಲ್ಲಿಸಲುಅವಕಾಶವಿದೆ ಎಂದರು.ಇದೇ ವೇಳೆ ಕಾರ್ಮಿಕ ಇಲಾಖೆಯಿಂದಕಾರ್ಮಿಕರಿಗೆ ಆಹಾರ ಕಿಟ್‌ ವಿತರಿಸಲಾಯಿತು.ಕಾರ್ಮಿಕ ನಿರೀಕ್ಷಕ ಪಿ. ಚಂದ್ರು, ವಕೀಲರ ಸಂಘದಕಾರ್ಯದರ್ಶಿ ಕುಮಾರಸ್ವಾಮಿ, ವಕೀಲ ಕೆ.ಬಿ. ಶಶಿಧರ್‌,ಹರಿಶ್ಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next