Advertisement

ಶಾಲೆಗೆ ಬೀಗ ಜಡಿದು ಪ್ರತಿಭಟನೆ

05:57 PM Jan 25, 2022 | Shwetha M |

ಇಂಡಿ: ಶಾಲಾ ಮಕ್ಕಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮತ್ತು ಶಾಲೆ ಅವ್ಯವಸ್ಥೆಯನ್ನು ಖಂಡಿಸಿ ಸೋಮವಾರ ಶಾಲೆಗೆ ಬೀಗ ಜಡಿದು ವಿದ್ಯಾರ್ಥಿಗಳ ಪಾಲಕರು ಪ್ರತಿಭಟನೆ ನಡೆಸಿದ ಘಟನೆ ಇಂಡಿ ತಾಲೂಕಿನ ಗೊರನಾಳ ಗ್ರಾಮದಲ್ಲಿ ನಡೆದಿದೆ.

Advertisement

ಈ ವೇಳೆ ಬಸವರಾಜ ಹಟ್ಟಿ ಹಾಗೂ ಶಿವಾನಂದ ಗಂಗನಳ್ಳಿ ಮಾತನಾಡಿ, ಪ್ರೌಢಶಾಲೆ ಮುಖ್ಯ ಶಿಕ್ಷಕ ಸರಿಯಾಗಿ ಶಾಲೆಗೆ ಬರಲ್ಲ. ಗೊರನಾಳ ಗ್ರಾಮದಲ್ಲಿರುವ ಸರಕಾರಿ ಪ್ರೌಢಶಾಲೆ ಆಡಳಿತ ಮಂಡಳಿ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚಲ್ಲಾಟವಾಡುತ್ತಿದ್ದಾರೆ. ಶಿಕ್ಷಕರು ಸರಿಯಾಗಿ ಶಾಲೆಗೆ ಬರದೆ ಚಕ್ಕರ್‌ ಹಾಕುತ್ತಿದ್ದಾರೆ. ಕೂಡಲೆ ಶಿಕ್ಷಣ ಇಲಾಖೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಗ್ರಾಮಸ್ಥರಾದ ಶಿವಾನಂದ ಗಂಗನಳ್ಳಿ, ಬಸವರಾಜ ಹಟ್ಟಿ, ಮಲ್ಲು ಶಾಮನೂರ, ಶರಣಗೌಡ ಗಂಗನಳ್ಳಿ, ಶರಣಗೌಡ ಹಟ್ಟಿ, ರಾಮ ದರ್ಗಿ, ಹನುಮಂತ ಹಟ್ಟಿ, ವಿಠuಲ ಪಟ್ಟಣ, ಚಂದು ಸಾಗನೂರ, ಜಕ್ಕಪ್ಪ ಕುಂಬಾರ, ಬಾಗಣ್ಣ ಮಾಶ್ಯಾಳ ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಪಾಲಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next