Advertisement
ಸಾರ್ವಜನಿಕರ ದೂರಿನ ಮೇರೆಗೆ ರಿಲಯನ್ಸ್ ಮಾರ್ಕೆಟ್ಗೆ ಕಳೆದ ಅ. 13ರಂದು ಪಾಲಿಕೆ ಆಯುಕ್ತರು ಮತ್ತು ಆರೋಗ್ಯ ಶಾಖೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿದಾಗ ಸುಮಾರು 1.5 ಟನ್ನಷ್ಟು ಅಪಾರ ಪ್ರಮಾಣದ ನಿಷೇಧಿತ ಪ್ಲಾಸ್ಟಿಕ್ ಪತ್ತೆ ಆಗಿತ್ತು. ಜತೆಗೆ ಅವಧಿ ಮುಗಿದ, ಹಳಸಿದ ಕೇಕ್ ಸೇರಿದಂತೆ ಆಹಾರ ಪದಾರ್ಥಗಳು ಮತ್ತು ಅವುಗಳ ಮೇಲಿನ ಲೇಬಲ್ ಕಿತ್ತು ಮಾರಾಟ, ಅಸಮರ್ಪಕ ತ್ಯಾಜ್ಯ ವಿಲೇವಾರಿ ಸೇರಿದಂತೆ ಉದ್ದಿಮೆಯಲ್ಲಿ ಹಲವು ನ್ಯೂನ್ಯತೆಗಳು ಮತ್ತು ಕಾನೂನು ಉಲಂಘನೆ ಎಸಗಿರುವುದು ಕಂಡು ಬಂದಿತ್ತು. ಪಾಲಿಕೆಯಿಂದ ನೀಡಲಾಗಿರುವ ಉದ್ದಿಮೆ ಪರವಾನಗಿ ಪರಿಶೀಲಿಸಿದಾಗ ಪರವಾನಗಿ ಪಡೆಯಲು ವಾಸ್ತವದಲ್ಲಿ ಒಟ್ಟು ವಿಸ್ತೀರ್ಣಕ್ಕೆ ಬದಲಾಗಿ ಕಡಿಮೆ ವಿಸ್ತೀರ್ಣವೆಂದು ತಪ್ಪು ಮಾಹಿತಿ ನೀಡಿರುವುದಲ್ಲದೆ, ಸೂಪರ್ ಮಾರ್ಕೆಟ್ ಎಂದು ಪರವಾನಗಿ ಪಡೆದು ತೆರೆದ ಆಹಾರ ಪದಾರ್ಥಗಳನ್ನು ಮಾರುವ ಮೂಲಕ ಕರ್ನಾಟಕ ಪೌರ ನಿಗಮಗಳ ಕಾಯ್ದೆಯಡಿ ಪ್ರಮಾದವೆಸಗಲಾಗಿದೆ.
ತಿಳಿಸಿದ್ದಾರೆ. ಪರಿಸರ ಅಭಿಯಂತರ ಸುನೀಲ್, ಆರೋಗ್ಯ ನಿರೀಕ್ಷಕ ಸಂತೋಷ್ ಕುಮಾರ್, ಅಲ್ತಮಷ್, ರಾಜಪ್ಪ, ಪ್ರಕಾಶ…, ಉಷಾ, ಲಕ್ಷ್ಮೀ, ಮಹಾಂತೇಶ್, ಜಯಪ್ರಕಾಶ್, ಮಹಾಂತೇಶ್, ಕರಿಬಸಪ್ಪ, ಕಾಂತರಾಜ್ ಇತರರು ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.