Advertisement

ಅಕ್ರಮ ಮಾಂಸದ ಅಂಗಡಿಗಳಿಗೆ ಬೀಗ

11:56 AM Jul 06, 2018 | Team Udayavani |

ಪಿರಿಯಾಪಟ್ಟಣ: ಅಕ್ರಮವಾಗಿ ನಡೆಸುತ್ತಿದ್ದ ಮಾಂಸದ ಅಂಗಡಿಗಳನ್ನು ಪಿಡಿಒ ನೇತೃತ್ವದಲ್ಲಿ ಬಾಗಿಲು ಮುಚ್ಚಿಸಿದ ಘಟನೆ ನಡೆದಿದೆ. ಬೆಟ್ಟದಪುರ ಗ್ರಾಪಂ ವತಿಯಿಂದ ಮಾಂಸದಂಗಡಿಗಳನ್ನು ಹರಾಜು ನಡೆಸಲಾಗಿತ್ತು.

Advertisement

ಹರಾಜಿನ ಸಮಯ ಮುಗಿದಿದ್ದು ನವೀಕರಣ ಮಾಡಿಕೊಂಡು ಹಣಪಾವತಿ ಮಾಡದೆ ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ಪಿಡಿಒ ಚಿದಾನಂದ್‌ ಮತ್ತು ಸಿಬ್ಬಂದಿ ಅಂಗಡಿಗಳಿಗೆ ಬೀಗ ಜಡಿದರು.

ಪಿಡಿಒ ಚಿದಾನಂದ್‌ ಮಾತನಾಡಿ, ಪಂಚಾಯಿತಿ ಒಪ್ಪಂದದಂತೆ ಪ್ರತಿವರ್ಷವೂ ಹಣ ಪಾವತಿ ಮಾಡಿ ಅಂಗಡಿಗಳನ್ನು ತಮ್ಮ ಜಾಗದಲ್ಲಿ ವ್ಯಾಪಾರ ಮಾಡಲು ಪಂಚಾಯಿತಿಯಿಂದ ತೀರ್ಮಾನಿಸಲಾಗಿತ್ತು. ಅದರಂತೆ  ಕಳೆದ ವರ್ಷ ವ್ಯಾಪಾರ ಆರಂಭಿಸಿದ ಹಲವು ಅಂಗಡಿ ಈ ವರ್ಷಕ್ಕೆ ನವೀಕರಣ ಮಾಡಿಕೊಳ್ಳದೆ  

ಪಂಚಾಯಿತಿ ಗಮನಕ್ಕೆ ಬಾರದಂತೆ ಅಕ್ರಮವಾಗಿ ವ್ಯಾಪಾರ ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ದೂರು ಬಂದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬೀಗ ಹಾಕಲಾಗಿದೆ. ನಿಗದಿಪಡಿಸಿದ ಹಣ ಪಾವತಿ ಮಾಡುವವರೆಗೆ ಮಾಂಸ ಮಾರಾಟಕ್ಕೆ ಅವಕಾಶ ನೀಡುವುದಿಲ್ಲಾ ಎಂದು ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಅಂಗಡಿ ಮಾಲಿಕರ ಸಂಘದ ಅಧ್ಯಕ್ಷ ಇಕ್ಬಾಲ್‌ ಷರೀಫ್, ಗ್ರಾಪಂ ಮಾಜಿ ಸದಸ್ಯ ಮುನಾವರ್‌ಪಾಷಾ ಮತ್ತು ಪೊಲೀಸ್‌ ಇಲಾಖೆ ಎಎಸ್‌ಐ ರುದ್ರೇಗೌಡ ಮತ್ತು ಬಿಲ್‌ಕಲೆಕ್ಟರ್‌ ಮಂಜೇಗೌಡ ಮತ್ತಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next