Advertisement

ಪಾಲಿಕೆ ನಿರ್ಮಿಸಿದ ಶೌಚಾಲಯಕ್ಕೆ ಬೀಗ!

06:55 PM Jan 10, 2022 | Team Udayavani |

ಸುರತ್ಕಲ್‌: ಸುರತ್ಕಲ್‌ ಸುತ್ತಮುತ್ತ ಮಂಗಳೂರು ಮಹಾನಗರ ಪಾಲಿಕೆ ಸಾರ್ವಜನಿಕರ ಶೌಚಾಲಯ ಕಟ್ಟಿದ್ದರೂ 5 ವರ್ಷಗಳಿಂದ ಬೀಗ ಜಡಿಯಲಾಗಿದೆ. ನಿರಾಶ್ರಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಎಲ್ಲೆಂದ ರೆಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದ ರಿಂದ ಸ್ವಚ್ಛತೆಗೆ ಧಕ್ಕೆ ಬರುವಂತಾಗಿದೆ.

Advertisement

ಸುರತ್ಕಲ್‌ ನಗರದ ಹೃದಯಭಾಗದಲ್ಲಿನ ಬಸ್‌ ನಿಲ್ದಾಣದ ಹಿಂಭಾಗದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಇದಕ್ಕೆ ಮುಖ್ಯವಾಗಿ ಬೇಕಾಗಿರುವ ಒಳಚರಂಡಿ ಸಂಪರ್ಕವನ್ನೇ ನೀಡಲಾಗಿಲ್ಲ. ತರಾತುರಿ ಯಲ್ಲಿ ಶೌಚಾಲಯ ಕಟ್ಟಡ ನಿರ್ಮಿಸಿದ್ದು, ಇದೀಗ ಪಾಳು ಬೀಳುವಂತಾಗಿದೆ.

ಸುರತ್ಕಲ್‌ ಪಶು ವೈದ್ಯಕೀಯ ಕೇಂದ್ರದ ಬಳಿ ಎರಡನೇ ಶೌಚಾಲಯ ನಿರ್ಮಿಸಲಾಗಿದೆ. ಇಲ್ಲಿ ಒಳಚರಂಡಿ ಬದಲಾಗಿ ಶೌಚ ಗುಂಡಿ ನಿರ್ಮಿಸಲಾಗಿದೆ. ಸ್ಥಳೀಯ ಒಂದೆರಡು ಸಂಸ್ಥೆಯವರು ಬಿಟ್ಟರೆ ಉಳಿದವರಿಗೆ ಇದರ ಬಳಕೆ ಸಾಧ್ಯವಾಗಿಲ್ಲ. ಕಾರಣ ಈವರೆಗೆ ಇದನ್ನು ಗುತ್ತಿಗೆ ಪಡೆಯಲು ಯಾರೂ ಮುಂದೆ ಬಂದಿಲ್ಲ. ಬೈಕಂಪಾಡಿ ಕೂಳೂರು ಪ್ರದೇಶದಲ್ಲಿಯೂ ಸಾರ್ವಜನಿಕ ಶೌಚಾಲಯದ ಇದೇ ಕಥೆ.

ಲಕ್ಷಾಂತರ ರೂ. ಪೋಲು
ತಲಾ 8 ಲಕ್ಷ ರೂ.ಯಂತೆ 32 ಲಕ್ಷ ರೂ. ಶೌಚಾಲಯಕ್ಕೆ ಬಳಕೆಯಾಗಿದೆ ಎಂಬುದು ಲೆಕ್ಕಾಚಾರ. ಆದೇ ಸಂದರ್ಭದಲ್ಲಿ ಇದಕ್ಕೆ ಬೇಕಾದ ಮೂಲಸೌಕರ್ಯ ನೀಡಲು ಕಡೆಗಣಿಸಲಾಗಿದೆ. ಇಷ್ಟೊಂದು ತರಾತುರಿ ಯಲ್ಲಿ ಕೇವಲ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಿದ್ದು ಯಾಕೆ. ತೆರಿಗೆ ಹಣವನ್ನು ವೃಥಾ ಪೋಲು ಮಾಡುವ ಬದಲು ಇತರ ಯೋಜನೆಗೆ ಬಳಕೆ ಮಾಡಬಹುದಿತ್ತು. ಇಲ್ಲವೇ ಸುಸಜ್ಜಿತ ಶೌಚಾಲಯ ನಿರ್ಮಿಸಿ ಬಿಟ್ಟುಕೊಡಬೇಕಿತ್ತು ಎಂಬುದು ಸ್ಥಳೀಯರ ಅಭಿಪ್ರಾಯ.

ಸಾರ್ವಜನಿಕರ ಪರದಾಟ
ಪಶು ವೈದ್ಯಕೀಯ ಕಟ್ಟಡದ ಬಳಿ ಇರುವ ಶೌಚಾಲಯ ಸುರತ್ಕಲ್‌ ಬಸ್‌ ನಿಲ್ದಾಣದ ಸಮೀಪವಿರುವುದರಿಂದ ಹಣ ಪಾವತಿಸಿ ಬಳಸುವ ಬಗ್ಗೆ ಪಾಲಿಕೆ ಕ್ರಮ ಕೈಗೊಳ್ಳಬಹುದಿತ್ತು.

Advertisement

ಈಗಿನ ಬಸ್‌ ನಿಲ್ದಾಣದ ಬಳಿ ಯಾವುದೇ ಸೌಲಭ್ಯವಿಲ್ಲ. ಮಕ್ಕಳು, ಹಿರಿಯರು, ಮಹಿಳೆಯರು ಸಹಿತ ನೂರಾರು ಮಂದಿ ನಿತ್ಯ ಉಡುಪಿ, ಮಂಗಳೂರು ಬಸ್‌ಗಾಗಿ ಇಲ್ಲೇ ಕಾಯ ಬೇಕಿದೆ. ಇಲ್ಲಿನ ಶೌಚಾಲಯ ಬಾಗಿಲು ತೆಗೆದೇ ಇಲ್ಲ. ಬಂದವರು ಶೌಚಾಲಯ ವಿಲ್ಲದೆ ಪರದಾಡುವಂತಾಗಿದೆ.

ಅಧಿಕಾರಿಗಳಲ್ಲಿ ಚರ್ಚಿಸಿ ಕ್ರಮ
ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸಿದ ಸುಲಭ ಶೌಚಾಲಯಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟು ಕೊಡುವ ಬಗ್ಗೆ ಆಧಿಕಾರಿಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
– ಪ್ರೇಮಾನಂದ ಶೆಟ್ಟಿ, ಮೇಯರ್‌ ಮನಪಾ,

ಮೂಲಸೌಕರ್ಯ ಒದಗಿಸಿ ಬಳಕೆಗೆ
ಬಜೆಟ್‌ ಪೂರ್ವಭಾವಿ ಸಭೆ ಸಂದರ್ಭ ಶೌಚಾಲಯಕ್ಕೆ ಬೀಗ ಹಾಕಿರುವ ಬಗ್ಗೆ ಆಯುಕ್ತರ ಗಮನಕ್ಕೆ ಬಂದಿದೆ. ಮೂಲಸೌಕರ್ಯ ಒದಗಿಸಿ ಸ್ಥಳೀಯವಾಗಿ ಯಾರಾದರೂ ನಿರ್ವಹಣೆಗೆ ಸಿಕ್ಕಿದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ನೀಡುವ ಬಗ್ಗೆ ಚಿಂತಿಸಲಾಗುವುದು.
– ಸುಶಾಂತ್‌, ಹಿ.ಆ. ನಿರೀಕ್ಷಕರು, ಪಾಲಿಕೆ ಉಪ ಕಚೇರಿ, ಸುರತ್ಕಲ್‌

- ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next