Advertisement
ಚೆಂಗಳ ಪಂಚಾಯತ್ನ ನಾಯಮ್ಮಾರಮೂಲೆ ಪೆರುಂಬಳ ಕಡವ್ ಸೇತುವೆ ಸಮೀಪ ಚಂದ್ರಗಿರಿ ಚಾರಿಟೆಬಲ್ ಟ್ರಸ್ಟ್ ಎಂಬ ಹೆಸರಿನಲ್ಲಿರುವ ಪಿಎಫ್ಐ ಜಿಲ್ಲಾ ಕಚೇರಿಗೆ ಬೀಗ ಜಡಿದು ಮೊಹರು ಲಗತ್ತಿಸಲಾಗಿದೆ. ಈ ಮೊದಲು ಪಿಎಫ್ಐ ಮತ್ತು ಅದರ ಸಹ ಸಂಘಟನೆಗಳ ಮೇಲೆ ಕೇಂದ್ರ ಸರಕಾರ ಹೇರಿದ ನಿಷೇಧದ ಪೂರ್ಣ ಮಾಹಿತಿಗಳನ್ನೊಳಗೊಂಡ ನೋಟಿಸನ್ನು ಈ ಕಚೇರಿಯ ಎದುರುಗಡೆ ಬಾಗಿಲಿಗೆ ಲಗತ್ತಿಸಲಾಗಿದೆ. ಎನ್ಐಎ ಕೊಚ್ಚಿ ಘಟಕದ ಚೀಫ್ ಇನ್ವೆಸ್ಟಿಗೇಶನ್ ಆಫೀಸರ್ ಕೆ. ಉಮೇಶ್ ರಾಯ್ ಅವರ ನೇತೃತ್ವದ ಎನ್ಐಎ ತಂಡ ಈ ಕಚೇರಿಗೆ ನೋಟಿಸ್ ಲಗತ್ತಿಸಿ ಬೀಗ ಜಡಿದಿದೆ. ಇಬ್ಬರು ತಹಶೀಲ್ದಾರರು, ಡಿವೈಎಸ್ಪಿಗಳಾದ ವಿ.ವಿ. ಮನೋಜ್, ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ಅನೂಪ್ ಕುಮಾರ್ ಸಹಿತ ಹಲವು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement
ಕಾಸರಗೋಡು : ಪಿಎಫ್ಐ ಜಿಲ್ಲಾ ಕಚೇರಿಗೆ ಎನ್ಐಎಯಿಂದ ಬೀಗ
10:04 AM Oct 02, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.