Advertisement

ಮೆರವಣಿಗೆ ವೇಳೆ ಮಲಗಿದ ಭಕ್ತರ ಮೇಲೆ ನಡೆದ ಪಲ್ಲಕ್ಕಿ ಹೊತ್ತ ಪೂಜಾರಿ

05:06 PM Apr 05, 2021 | Girisha |

ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ತಾಲೂಕ ತಂಗಡಗಿ ಗ್ರಾಮದಲ್ಲಿ ದೇವರ ಪಲ್ಲಕ್ಕಿ ಹೊತ್ತ ಪೂಜಾರಿ ಮೆರವಣಿಗೆ  ಮಾರ್ಗದಲ್ಲಿ ಮಲಗಿದ್ದ ಹರಕೆ ಹೊತ್ತ ಭಕ್ತರ ಮೇಲೆ ನಡೆದುಕೊಂಡು ಹೋಗಿರುವ ಸಂಪ್ರದಾಯ ಚರ್ಚೆಗೆ ಗ್ರಾಸವಾಗಿದೆ.

Advertisement

ತಂಗಡಗಿ ಗ್ರಾಮದ ಸುಂಗಠಾಣ ಸಿದ್ದಪ್ಪ ಮುತ್ಯಾನ ಪಲ್ಲಕ್ಕಿ ಪುರಪ್ರವೇಶ ಸಂದರ್ಭ ಭಕ್ತರು ನೆಲದ ಮೇಲೆ ಮಲಗಿ ಹರಕೆ ತೀರಿಸಿದ್ದು, ಮಲಗಿದ್ದವರ ಮೇಲೆ ಪಲ್ಲಕ್ಕಿ ಹೊತ್ತ ಪೂಜಾರಿ ಓಡಾಡುವ ಮೂಲಕ ಸಂಪ್ರದಾಯ ಪಾಲಿಸಿದರು.

ಇದು ಪ್ರತಿ ವರ್ಷ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದರೂ ಭಕ್ತರು ಕೋವಿಡ್ ಕುರಿತ ಯಾವ ಮುನ್ನೆಚ್ಚರಿಕೆ ವಹಿಸದೇ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಬಂಧ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ.

ಸೋಮವಾರ ದಿಂದ ಉತ್ಸವ ಆರಂಭಗೊಂಡಿದ್ದು, ಮಂಗಳವಾರ ಕೂಡ ಮುಂದುವರೆಯಲಿದೆ. ಸದರಿ ಉತ್ಸವದಲ್ಲಿ ದೇವರಿಗೆ ಮದ್ಯ ನೈವೇದ್ಯ ನೀಡುವ ಸಂಪ್ರದಾಯ ಇದ್ದು, ಪುರುಷರೊಂದಿಗೆ ಮಹಿಳೆ, ಮಕ್ಕಳೆಂಬ ವ್ಯತ್ಯಾಸ ಇಲ್ಲದೇ ಭಕ್ತರೆಲ್ಲರೂ ಸಿದ್ದಪ್ಪ ಮುತ್ಯಾಗೆ ಮದ್ಯ ಬಾಟಲಿ ಸಮರ್ಪಿಸುತ್ತಾರೆ. ಜೊತೆಗೆ ಗ್ರಾಮಕ್ಕೆ ಹೊಂದಿಕೊಂಡಿರುವ ಕೃಷ್ಣಾ ನದಿ ತೀರದಲ್ಲೇ ಭಕ್ತರು ಮದ್ಯ ಸೇವಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next