Advertisement

ಸಾಲ ಆ್ಯಪ್‌ಗೆ ಶೀಘ್ರ ಅಂಕುಶ : ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಭರವಸೆ

10:02 PM Jun 09, 2022 | Team Udayavani |

ಮುಂಬಯಿ : ಸಾಲ ನೀಡುವ ಆ್ಯಪ್‌ ಗಳ ಮೂಲಕ ವಂಚನೆ ಎಸಗುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ. ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಶೀಘ್ರವೇ ಹೊಸ ನಿಯಮಗಳನ್ನು ಜಾರಿ ಮಾಡಲಾಗುತ್ತದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

Advertisement

ಆ್ಯಪ್‌ ಗಳ ಮೂಲಕ ಸಾಲ ನೀಡುವ ಜಾಲಕ್ಕೆ ಹಲವರು ಬಲಿಯಾಗುತ್ತಿರುವ ಅಂಶ ಆರ್‌ಬಿಐ ಗಮನಕ್ಕೆ ಬಂದಿದೆ. ಅವುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಲಾಗುತ್ತಿದೆ. ಅದು ಅಂತಿಮಗೊಂಡ ಕೂಡಲೇ ಅನುಷ್ಠಾನಗೊಳಿಸಲಾಗುತ್ತದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.

ಸಾಲದ ಆ್ಯಪ್‌ ಗಳಿಂದ ಕಿರುಕುಳ ಉಂಟಾದರೆ ಕೂಡಲೇ ಸ್ಥಳೀಯ ಪೊಲೀಸ್‌ ಠಾಣೆಗೆ ತೆರಳಿ ದೂರು ಸಲ್ಲಿಸುವಂತೆ ಬುಧವಾರ ಆರ್‌ಬಿಐಯ ವಿತ್ತೀಯ ನೀತಿ ಪರಿಶೀಲನ ಸಭೆಯಲ್ಲಿ ಶಕ್ತಿಕಾಂತ ದಾಸ್‌ ಸಲಹೆ ನೀಡಿದ್ದರು. ಸಾಲ ಆ್ಯಪ್‌ ಗಳ ಮೂಲಕ ವಹಿವಾಟು ಮಾಡುವ ಮೊದಲು ಅವು ಆರ್‌ಬಿಐಯಿಂದ ಮಾನ್ಯತೆ ಪಡೆದಿವೆಯೇ ಎಂದು ಗ್ರಾಹಕರು ಪರಿಶೀಲಿಸಿ, ಖಚಿತಪಡಿಸಿಕೊಳ್ಳಬೇಕು ಎಂದು ದಾಸ್‌ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ : ಶವಸಂಸ್ಕಾರ ಸ್ಮಶಾನ ಜಾಗ ಮಂಜೂರು: ಕೋರ್ಟ್‌ ಆದೇಶ ಪಾಲನೆಗೆ ವಿಫ‌ಲ;  ಹೈಕೋರ್ಟ್‌ ತರಾಟೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next