Advertisement

ನೀರಿನ ಕೊರತೆಯಿಂದ ಆಹಾರಕ್ಕೆ ಕೊಕ್ಕರೆಗಳ ಪರದಾಟ

03:44 PM May 23, 2022 | Team Udayavani |

ದೇವನಹಳ್ಳಿ: ತಾಲೂಕಿನ ಆಲೂರು ದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡಕೆರೆಯಾದ ಬನ್ನಿಮಂಗಲ ಕೆರೆಯಲ್ಲಿ ಕೊಕ್ಕರೆಗಳ ಕಲರವದ ದೃಶ್ಯ ನೋಡಬಹುದಾಗಿದೆ. ಮಳೆಯಿಂದಾಗಿ ಕೆರೆಯ

Advertisement

ತಳಭಾಗದಲ್ಲಿ ಒಂದಿಷ್ಟು ನೀರಿನಲ್ಲಿ ಮೀನುಗಾರಿಕೆ ಇಲಾಖೆಯವರು ಮೀನುಮರಿಗಳನ್ನು ಟೆಂಡರ್‌ ಮೂಲಕ ಬಿಡಲಾಗಿದೆ. ಮೀನುಗಳನ್ನು ತಿಂದು ಬದುಕುವಂತಹ ಕೊಕ್ಕರೆಗಳಿಗೆ ಮತ್ತು ಮೀನುಗಳಿಗೆ ಕೆರೆಯಲ್ಲಿರಬೇಕಾದಷ್ಟು ನೀರು ಇಲ್ಲದಿರುವುದು ವಿಪರ್ಯಾಸವಾಗಿದೆ.

ಪಕ್ಷಿಗಳ ಕಲರವದಿಂದ ಹೊಸ ಕಳೆ: ಬನ್ನಿಮಂಗಲ ಕೆರೆಯಲ್ಲಿ ದಕ್ಷಿಣ ಭಾರತದ ಕೊಕ್ಕರೆ ಪ್ರಭೇದಗಳ ಅವಾಸಸ್ಥಾನವಾಗಿರುವುದರಿಂದ ಸಾಮಾನ್ಯವಾಗಿ ಇಲ್ಲಿಗೆ ಮಧ್ಯ ಏಷ್ಯಾದ ಗ್ರೇಹೆರಾನ್‌, ವೈಟ್‌ ಪೆಲಿಕಾನ್‌, ಗ್ರೇವೆಲಿಕಾನ್‌, ಪೈಂಟೆಂಡ್‌ ಸ್ಟ್ರಾಕ್‌ ಇತ್ರೆ ಹೊಸ ಪ್ರಭೇದಗಳ ಪಕ್ಷಿಗಳು ಬಂದು ಕೆರೆಗೆ ಮತ್ತಷ್ಟು ಮೆರಗು ನೀಡಲಿವೆ. ಸರ್ಕಾರ ಇಂತಹ ಕೆರೆಗಳಿಗೆ ಮೊದಲ ಆದ್ಯತೆ ನೀಡಿದರೆ, ಇಲ್ಲಿನ ವಾತಾವರಣ ಕೊಕ್ಕರೆ ಬೆಳ್ಳೂರಿನಂತೆ ಕಂಗೊಳಿಸುವಲ್ಲಿ ಎರಡು ಮಾತಿಲ್ಲ.

ಸಾಮಾನ್ಯವಾಗಿ ಪೆಲಿಕಾನ್‌ ಪಕ್ಷಿಗಳು ಹೆಚ್ಚಿನ ನೀರಿರುವ ಕೆರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಪ್ರಸ್ತತ ತಾಲೂಕಿನ ಬನ್ನಿಮಂಗಲ ಕೆರೆಯಲ್ಲಿ ಹೆಚ್ಚು ನೀರು ಇಲ್ಲದಿದ್ದರೂ ಸಹ ಇರುವ ನೀರಿನಲ್ಲಿ ಮೀನುಗಳಿರುವುದರಿಂದ ಆಹಾರಕ್ಕಾಗಿ ಪಕ್ಷಿಗಳು ಬೆಳ್ಳಂಬೆಳಗ್ಗೆ ಗುಂಪು ಗುಂಪಾಗಿರುವುದನ್ನು ಕಾಣಬಹುದು.

ಅಂತರ್ಜಲ ಹೆಚ್ಚಿಸಿ: ಕೆರೆಯು ಸುಮಾರು ಎಕರೆಯಷ್ಟು ವಿಸ್ತೀರ್ಣ ಹೊಂದಿರುವುದರಿಂದ ಈ ಹಿಂದೆ ಸರ್ಕಾರದ ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ಬಿಡಲು ಪ್ರಸ್ತಾಪಿಸಲಾಗಿತ್ತು. ದುರದೃಷ್ಟವಷತ್‌ ಕೆರೆಗೆ ಪೈಪ್‌ಲೇನ್‌ ಸಹ ಆಗಿಲ್ಲ. ಬನ್ನಿಮಂಗಲದ ಕೆರೆಯಲ್ಲಿ ತಮಿಳು ಗ್ರಂಥಲಿಪಿ ಶಾಸನವೂ ಸಹ ಇದ್ದು, ಕೆರೆಗೆನೀರು ಹಾಯಿಸಿದರೆ ಅಂತರ್ಜಲ ಹೆಚ್ಚಾಗಿ ಈ ಭಾಗದಲ್ಲಿ ಹಚ್ಚ ಹಸಿರಿನ ಸಮೃದ್ಧ ವಾತಾವರಣಸೃಷ್ಟಿಯಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Advertisement

ನೀರಿನ ಕೊರತೆಯಲ್ಲೂ ಆಹಾರ ಅರೆಸಿ ಬರುವಂತಹ ಕೊಕ್ಕರೆಗಳು ಕೆರೆಯಂಗಳದಲ್ಲಿಬಿಡಾರಹೂಡಿದ್ದು ನೋಡುಗರ ಕಣ್ಮನಸೆಳೆಯುತ್ತಿವೆ. ಕೆರೆಗೆ ಮರುಜೀವ ನೀಡಲು ಸರ್ಕಾರ

ಮುಂದಾಗಲಿ: ಬಿರು ಬೇಸಿಗೆಯಲ್ಲಿ ಬತ್ತಿಹೋಗುವ ಕೆರೆಗೆ ಮರುಜೀವ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಕೆರೆ ಅಭಿವೃದ್ಧಿಪಡಿಸಿ ವರ್ಷ ಕಳೆಯುತ್ತಿದ್ದರೂ ಸಹ ಕೆರೆಯ ಮಡಿಲು ಮಾತ್ರಬರಿದಾಗಿದೆ. ಕಳೆದ ವರ್ಷದಲ್ಲಂತೂ ಕೆರೆಯಲ್ಲಿಒಂದು ತೊಟ್ಟು ನೀರು ಸಹ ಇರಲಿಲ್ಲ. ಇದೀಗ ಮಳೆಯಿಂದಾಗಿ ಅಲ್ಪಸ್ವಲ್ಪ ನೀರು ಕಾಣಿಸುತ್ತಿದೆ. ಕೈಗಾರಿಕಾ ಪ್ರದೇಶವಾಗಿರುವ ದೊಡ್ಡಬಳ್ಳಾಪುರತಾಲೂಕಿನ ಗಡಿಯಂಚಿನಲ್ಲಿರುವ ಈ ಕೆರೆಯೂದೊಡ್ಡಬಳ್ಳಾಪುರದಿಂದ ಸುಮಾರು 10 ಕಿ.ಮೀ.ದೂರದಲ್ಲಿದೆ. ಆಲೂರುದುದ್ದನಹಳ್ಳಿ ಗ್ರಾಪಂಗೆಸೇರಿರುವ ಕೆರೆಗೆ ಮರುಜೀವ ನೀಡುವ ಕೈಂಕರ್ಯಕ್ಕೆ ಸರ್ಕಾರ ಮುಂದಾಗಬೇಕಾಗಿದೆ.

ಬಿರು ಬೇಸಿಗೆಯಲ್ಲಿ ಪಕ್ಷಿ ಪ್ರಭೇದಗಳಿಗೆ ಕೆರೆ, ಕುಂಟೆ ಮತ್ತು ಇತರೆ ನೀರಿನ ಮೂಲಗಳೇ ಜೀವಾಳ. ಆದರೆ, ಬನ್ನಿಮಂಗಲ ಕೆರೆಯಲ್ಲಿ ನೀರಿಲ್ಲದೆ ಬರಿದಾಗುತ್ತಿರುವುದು ಪಕ್ಷಿಗಳ ಅವನತಿಗೆ ಮತ್ತು ಕೆರೆಯ ನಿರ್ಲಕ್ಷ್ಯತನಕ್ಕೆ ಕೈಗನ್ನಡಿಯಾಗಿದೆ. – ಮೀನಾಕುಮಾರಿ, ಗ್ರಾಪಂ ಸದಸ್ಯೆ, ಆಲೂರುದುದ್ದನಹಳ್ಳಿ

ನೀರಿನ ಕೊರತೆಯಲ್ಲೂ ಮುಂಜಾನೆಯಲ್ಲಿ ಪಕ್ಷಿಗಳ ಕಲರವನ್ನು ಕೆರೆಯಲ್ಲಿ ನೋಡಬಹುದು. ಸರ್ಕಾರದ ನಿರ್ಲಕ್ಷ್ಯದಿಂದಕೆರೆಗೆ ನೀರು ಬಂದಿಲ್ಲ. ಆಲೂರು ದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬನ್ನಿ ಮಂಗಲ ಕೆರೆಯೂ ದೊಡ್ಡಕೆರೆಯಾಗಿರುವು ದರಿಂದ ಈ ಕೆರೆಗೆ ಆದಷ್ಟು ಬೇಗ ನೀರು ತುಂಬಿಸಲು ಸರ್ಕಾರ ಮನಸ್ಸು ಮಾಡಬೇಕು. – ಆರ್‌.ರಘು, ಗ್ರಾಪಂ ಸದಸ್ಯ, ಆಲೂರುದುದ್ದನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next