Advertisement

ಸಾಹಿತಿಗಳು ಸಂಸ್ಕೃತಿಯ ಸಂರಕ್ಷರು: ಪ್ರೊ.ಭೈರವಮೂರ್ತಿ

04:17 PM Sep 03, 2017 | |

ಮಂಡ್ಯ: ಸಾಹಿತಿಗಳು ಸಂಸ್ಕೃತಿಯ ಸಂರಕ್ಷಕರು ಹಾಗೂ ಕನ್ನಡದ ಶಕ್ತಿ ಕೇಂದ್ರಗಳಾಗಿದ್ದಾರೆ.
ಸಾಹಿತಿಗಳನ್ನು ಸಂರಕ್ಷಿಸಿದರೆ ಕನ್ನಡ ಸಂರಕ್ಷಿಸಿದಂತೆ ಎಂದು ಹಿರಿಯ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅಭಿಪ್ರಾಯಪಟ್ಟರು.

Advertisement

ನಗರದ ಗಾಂಧಿಭವನದಲ್ಲಿ ಸಂಸ್ಕೃತಿ ಸಂಘಟನೆ ಹಮ್ಮಿಕೊಂಡಿದ್ದ ಸಾಹಿತಿ ದಂಪತಿಗಳಿಗೆ ತವರಿನ
ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತಿಗಳು ಸಮಾಜಕ್ಕೆ ನೀಡುವ ಬೆಳಕು ಮತ್ತು ಮಾದರಿಯಿಂದ ಸಂಸ್ಕಾರ ದೊರೆಯುತ್ತದೆ. 

ಇದರಿಂದ ಬದುಕಿನ ಸಾರ್ಥಕತೆ ಕಾಣಲು ಸಾಧ್ಯವಾಗುತ್ತದೆ. ಸಾಹಿತಿಗಳು ಬೆಳಕು ಮತ್ತು
ಮಾದರಿಯನ್ನು ಮಾನವ ಹಾಗೂ ಸಮಾಜಕ್ಕೂ ಹಂಚಬೇಕು. ಸಾಧಕರು ಸಮಾಜಕ್ಕೆ ಬೆಳಕು
ನೀಡುತ್ತಾರೆ. ಪರಿಪೂರ್ಣತೆಯನ್ನು ಹುಡುಕುವುದೇ ಸಂಸ್ಕೃತಿಯ ಲಕ್ಷಣ ಎಂದು ಹೇಳಿದರು.

ಕ್ರಿಯಾಶೀಲರಾಗಿರಬೇಕು: ಸಂಸ್ಕೃತಿಯು ಬದುಕಿಗೆ ಸುಕೃತಿ ತಂದುಕೊಡಲಿದೆ. ಸಾಹಿತಿಗಳು ಸುಮ್ಮನೆ ಕೂರಬಾರದು. ಕೊನೆಯ ಉಸಿರುವವರೆಗೂ ಕ್ರಿಯಾಶೀಲರಾಗಿ ಸಂಸ್ಕೃತಿ ಉಳಿಸುವ, ಸಮಾಜವನ್ನು ತಿದ್ದುವ ಹಾಗೂ ಉತ್ತಮ ಸಮಾಜ ರೂಪಿಸಲು ಕೆಲಸ ಮಾಡುತ್ತಲೇ ಇರಬೇಕು. ಅವರು ನಿಜವಾದ ಉತ್ತಮ ಸಾಹಿತಿಗಳಾಗಿ ಉಳಿದುಕೊಳ್ಳುತ್ತಾರೆ ಎಂದು ತಿಳಿಸಿದರು.

ಮಾನವೀಯ ಕಳಕಳಿ: ಸಾಹಿತಿಗಳಲ್ಲಿ ಮಾನವೀಯ ಕಳಕಳಿ ಹೆಚ್ಚಿರುತ್ತದೆ. ಮಾನವ ಧರ್ಮಕ್ಕೆ ಜೀವನ ಮೀಸಲಿಡಬೇಕು. ಕಾಯಕ ನಿಷ್ಠೆ, ಧರ್ಮ ನಿಷ್ಠೆಯನ್ನು ಸಾಹಿತಿಗಳಲ್ಲಿ ಕಾಣಲು ಸಾಧ್ಯ.
ಪ್ರತಿಯೊಬ್ಬರೂ ತಮಗೆ ತಾವೇ ನೀತಿ ಸಂಹಿತೆ ಅಳವಡಿಸಿಕೊಳ್ಳಬೇಕು. ವಿದ್ಯೆ ಜೊತೆಗೆ ವಿನಯ
ಇದ್ದರೆ ಜ್ಞಾನ ಸಂಪತ್ತು ಲಭಿಸುತ್ತದೆ. ಆದರೆ, ಯಾರೂ ಪರಿಪೂರ್ಣರಲ್ಲ. ಸಾಹಿತಿಗಳು ಕೂಡ
ಜ್ಞಾನ ತಪಸ್ವಿಗಳಾಗಿದ್ದಾರೆ. ಸಾಹಿತ್ಯ ಲೋಕಕ್ಕೆ ಸಾಹಿತಿ ದಂಪತಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಶ್ಲಾಗಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next