Advertisement
ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಕಳೆದ ಆರು ದಶಕಗಳಿಂದ ಮುಸ್ಲಿಂ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುತ್ತ ಬಂದಿತ್ತು. 2004ರಿಂದ ನಿರಂತರ ಮೂರು ಬಾರಿ ಸೋಲುಂಡಿದ್ದರಿಂದ ಈ ಬಾರಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಉತ್ಕಟ ಇಚ್ಛೆ ಹೊಂದಿತ್ತು. ಅದಕ್ಕಾಗಿ ಇದೇ ಮೊದಲ ಬಾರಿಗೆ ತಾನು ಹಲವು ದಶಕಗಳಿಂದ ಪಾಲಿಸಿಕೊಂಡು ಬಂದ “ಮುಸ್ಲಿಂ ಮೀಸಲು’ ಸಂಪ್ರದಾಯವನ್ನು ತಾನೇ ಮುರಿದು ಹಿಂದುಗಳಿಗೆ ಟಿಕೆಟ್ ನೀಡಿತು.
Related Articles
Advertisement
ಆದರೆ, ಕಾಂಗ್ರೆಸ್ ಈ ಬಾರಿ ಮುಸ್ಲಿಮೇತರರಿಗೆ ಟಿಕೆಟ್ ನೀಡಿದ್ದರಿಂದ ಮುಸ್ಲಿಮರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದರು. ಮೈತ್ರಿ ಅಭ್ಯರ್ಥಿ ಸೋಲಿಸುವ ಮೂಲಕ ತಮ್ಮ ಪ್ರಾಬಲ್ಯ ಏನು ಎಂಬುದನ್ನು ತೋರಿಸಲು ನಿರ್ಧರಿಸಿದ್ದರು. ಮುಸ್ಲಿಮರ ಈ ನಡೆ ಕಾಂಗ್ರೆಸ್ ಮತ ಪೆಟ್ಟಿಗೆಗೆ ಭಾರಿ ಪೆಟ್ಟು ನೀಡಿತು.
ಲಿಂಗಾಯತರೂ “ಕೈ’ ಬಿಟ್ಟರು: ಇನ್ನು ಎದುರಾಳಿ ಬಿಜೆಪಿ ಅಭ್ಯರ್ಥಿ ಲಿಂಗಾಯತ ಆಗಿದ್ದು, ತಮ್ಮ ಅಭ್ಯರ್ಥಿಯೂ ಲಿಂಗಾಯತ. ಆದರೆ, ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತ ಮತಗಳು ಸಹ ಕಾಂಗ್ರೆಸ್ಗೆ ಕೈ ಹಿಡಿಯಲಿವೆ ಎಂಬ ಜಾತಿ ಲೆಕ್ಕಾಚಾರವನ್ನು ಪಕ್ಷ ನಡೆಸಿತ್ತು.
ಈ ಲೆಕ್ಕಾಚಾರದ ಆಧಾರದಲ್ಲಿ ಕಾಂಗ್ರೆಸ್ ರಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದ ಡಿ.ಆರ್. ಪಾಟೀಲ ಅವರಿಗೆ ಟಿಕೆಟ್ ನೀಡಿತ್ತು. ಆದರೆ, ಇಲ್ಲಿಯೂ ಲಿಂಗಾಯತ ಮತಗಳು ಕೈಹಿಡಿಯ ಲಿಲ್ಲ. ಅವು ಮೋದಿ ಅಲೆಯಲ್ಲಿ ತೇಲಿ ಹೋಗಿ ಕಮಲ ಅರಳಿಸಿದವು. ಹೀಗಾಗಿ ಕಾಂಗ್ರೆಸ್ಗೆ ಜಾತಿ ಲೆಕ್ಕಾಚಾರವೂ ಸಹ ಕೈಕೊಟ್ಟಿತು.
* ಎಚ್.ಕೆ. ನಟರಾಜ