Advertisement

ಸಂಸದೆ ಸುಮಲತಾ ಸೋದರ ಸಂಬಂಧಿಗೆ ಜೀವ ಬೆದರಿಕೆ..!

10:49 AM Dec 03, 2021 | Team Udayavani |

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಸೋದರ ಸಂಬಂಧಿ ರೇಣುಕಾದೇವಿ ಅವರ ಮನೆಗೆ ನುಗ್ಗಿದ ಮಹಿಳೆ ಸೇರಿ ಮೂವರು ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿರುವ ಘಟನೆ ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಈ ಸಂಬಂಧ ಜೆ.ಪಿ.ನಗರ ನಿವಾಸಿ ರೇಣುಕಾದೇವಿ ನೀಡಿದ ದೂರಿನ ಮೇರೆಗೆ ಬ್ಯಾಂಕ್‌ ಉದ್ಯೋಗಿ ವಿಶಾಲಾಕ್ಷಿ ಭಟ್‌ ಹಾಗೂ ಇಬ್ಬರ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಖಾಸಗಿ ಬ್ಯಾಂಕ್‌ ಉದ್ಯೋಗಿಯಾಗಿರುವ ವಿಶಾಲಾಕ್ಷಿ ಭಟ್‌, ಕಳೆದ 5 ವರ್ಷಗಳ ಹಿಂದೆ ಜೀವ ವಿಮೆ ವಿಚಾರದ ಬಗ್ಗೆ ಚರ್ಚಿಸುವಾಗ ರೇಣುಕಾದೇವಿ ಅವರಿಗೆ ಪರಿಚಯ ವಾಗಿದ್ದರು.

ಇದನ್ನೂ ಓದಿ:- ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ನಮ್ಮ ಬಳಿ ಅಲ್ಪಾವಧಿ ವಿಮೆ ಮಾಡಿಸಿದರೆ ಕಡಿಮೆ ಅವಧಿಯಲ್ಲಿ ಹೆಚ್ಚು ಮೊತ್ತ ಬರುವುದಾಗಿ ಹೇಳಿ 60 ಲಕ್ಷ ರೂ. ಪಡೆದು ಮೋಸ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ 2015ರಲ್ಲಿ ವಿಶಾಲಾಕ್ಷಿ ಭಟ್‌ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ಯ ಈ ಪ್ರಕರಣ ಕೋರ್ಟ್‌ ವಿಚಾರಣಾ ಹಂತದಲ್ಲಿದೆ.

ನ.30ರಂದು ಸಂಜೆ ರೇಣುಕಾದೇವಿ ಮನೆಗೆ ಇಬ್ಬರು ಪುರುಷರೊಂದಿಗೆ ಬಂದ ವಿಶಾಲಾಕ್ಷಿ ಭಟ್‌ ಉದ್ದೇಶಪೂರ್ವಕವಾಗಿ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದರು. ತನ್ನ ಜತೆ ಬಂದಿದ್ದ ಇಬ್ಬರು ಪುರುಷರನ್ನು ಕೋರ್ಟ್‌ನ ಅಮೀನರೆಂದು ಪರಿಚಯಿಸಿದ್ದರು. ಕೇಸ್‌ ಕುರಿತು 2 ಹಾಳೆಗಳ ಮೇಲೆ ಸಹಿಗೆ ಸೂಚಿಸಿದ್ದು, ಅನುಮಾನಗೊಂಡು ಗುರುತಿನ ಚೀಟಿ ಕೇಳಿದಾಗ ವಿಶಾಲಾಕ್ಷಿ ಜೀವ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next