Advertisement

ಮಂಗಳೂರು: ವ್ಯಕ್ತಿಗೆ ಕರೆ ಮಾಡಿ ಜೀವ ಬೆದರಿಕೆ; ದೂರು ದಾಖಲು

01:07 PM Aug 09, 2022 | Team Udayavani |

ಮಂಗಳೂರು: ವ್ಯಕ್ತಿಯೊಬ್ಬನನ್ನು ಬೈಕ್‌ ನಲ್ಲಿ ಫಾಲೋ ಮಾಡಿದ ಹಾಗೂ ಬೆದರಿಕೆ ಕರೆ ಬಂದಿರುವ ಕುರಿತು ಕಂಕನಾಡಿ ಠಾಣೆ ದೂರು ದಾಖಲಾಗಿದೆ.

Advertisement

ಈ ಕುರಿತು ಮಾತಾನಾಡಿದ ಪೊಲೀಸ್ ಆಯುಕ್ತರು, ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನು ಬೈಕ್‌ ನಲ್ಲಿ ಫಾಲೋ ಮಾಡಿಕೊಂಡು ಬಂದಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿದಾಗ, ಹಿಂಬಾಲಿಸಿಕೊಂಡು ಬಂದವರು ಫುಡ್ ಡೆಲಿವರಿಯವರು ಎಂದು ಗೊತ್ತಾಗಿದೆ ಎಂದರು.

ಇದನ್ನೂ ಓದಿ: ವಿಟ್ಲ: ಗುಡ್ಡದಲ್ಲಿ ತಲೆ ಬರುಡೆ,ಎಲುಬು ಪತ್ತೆ: ಬಟ್ಟೆಯಿಂದ ಪತ್ತೆಯಾಯಿತು ವ್ಯಕ್ತಿಯ ಗುರುತು

ಆದರೆ ಆ ವ್ಯಕ್ತಿಗೆ ರಾತ್ರಿಯ ವೇಳೆ ಯಾರೋ ಇಂಟರ್‌ ನೆಟ್‌ ನಿಂದ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇದರ ಬಗ್ಗೆ ಈಗಾಗಲೇ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next