Advertisement

Karnataka: ಜೀವ ಬೆದರಿಕೆ ಪತ್ರ: ಗೃಹಸಚಿವರ ಭೇಟಿಗೆ ಸಿದ್ದವಾದ ಸಾಹಿತಿಗಳ ನಿಯೋಗ

11:14 PM Aug 17, 2023 | Team Udayavani |

ಬೆಂಗಳೂರು: ಸರಕಾರ ಬದಲಾದರೂ ಕೆಲವು ಸಾಹಿತಿಗಳಿಗೆ ಬೆದರಿಕೆ ಪತ್ರ ಬರುತ್ತಿರುವುದು ಇನ್ನೂ ನಿಂತಿಲ್ಲ. ಆ ಹಿನ್ನೆಲೆಯಲ್ಲಿ ಈ ಪತ್ರದ ಹಿಂದಿರುವ ದುಷ್ಟ ಶಕ್ತಿಗಳನ್ನು ಪತ್ತೆ ಹಚ್ಚುವಂತೆ ಕೋರಿ ಹಿರಿಯ ಸಾಹಿತಿ ಪ್ರೊ| ಎಸ್‌.ಜಿ.ಸಿದ್ದರಾಮಯ್ಯ, ಪ್ರೊ| ಕೆ.ಮರುಳಸಿದ್ದಪ್ಪ, ಹಿರಿಯ ಕಾದಂಬರಿಕಾರ ಕುಂ.ವೀರಭದ್ರಪ್ಪ, ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ವಸುಂಧರಾ ಭೂಪತಿ ಸಹಿತ ಹಲವು ಸಾಹಿತಿಗಳ ಮತ್ತು ಲೇಖಕಿಯರ ನಿಯೋಗ ಶನಿವಾರ ಗೃಹಸಚಿವ ಡಾ| ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಸಾಹಿತಿ ಪ್ರೊ| ಎಸ್‌.ಜಿ.ಸಿದ್ದರಾಮಯ್ಯ, ನನಗೆ ಪತ್ರ ಬಂದಿಲ್ಲ. ನಾನು ಈಗಾಗಲೇ ಮೂರು ಮನೆಗಳನ್ನು ಬದಲಾಯಿಸಿದ್ದೇನೆ. ಹಾಗಾಗಿ ಅವರಿಗೆ ನನ್ನ ಮನೆ ವಿಳಾಸ ತಿಳಿದಿಲ್ಲ. ಆದರೆ ವಸುಂಧರಾ ಭೂಪತಿ ಅವರ ನಿವಾಸದ ವಿಳಾಸಕ್ಕೆ ಮೂರನೇ ಪತ್ರ ಬಂದಿದೆ. ಅದರಲ್ಲಿ ನನ್ನ ಹೆಸರು, ಕುಂ.ವೀರಭದ್ರಪ್ಪ, ಬಂಜಗೆರೆ ಜಯಪ್ರಕಾಶ್‌ ಮತ್ತಿತರರ ಸಾಹಿತಿಗಳ ಹೆಸರುಗಳಿವೆ ಎಂದು ಹೇಳಿದರು.

Advertisement

ಗಂಭೀರವಾಗಿ ಪರಿಗಣನೆ
ಬೆದರಿಕೆ ಪತ್ರದ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಡಾ| ಜಿ.ಪರಮೇಶ್ವರ್‌, ಜೀವ ಬೆದರಿಕೆಯಿರುವ ಸಾಹಿತಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆದರಿಕೆ ಪತ್ರಗಳನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next