Advertisement
ಅಜ್ಜಿ ಬರೆಯುತ್ತಿದ್ದ ಪತ್ರವನ್ನೇ ನೋಡುತ್ತ ಕುಳಿತಿದ್ದ ಆ ಪುಟ್ಟ ಬಾಲಕ. ಕೊಂಚ ಹೊತ್ತು ಸುಮ್ಮನಿದ್ದವನು, ಬರೆಯುತ್ತಿದ್ದ ಅಜ್ಜಿಯನ್ನು ಉದ್ದೇಶಿಸಿ, “ಏನು ಬರೆಯುತ್ತಿದ್ದೀಯಾ ಅಜ್ಜಿ? ನಮ್ಮಿಬ್ಬರ ಬಗ್ಗೆ ಬರೆಯುತ್ತಿದ್ದೀಯಾ..’? ಎಂದು ಕೇಳಿದ್ದ. ಅವನತ್ತ ತಿರುಗಿದ ಅಜ್ಜಿ, ಸಣ್ಣಗೆ ಮುಗುಳ್ನಕ್ಕು, “ಹೌದು ಮಗೂ, ನಾನು ಬರೆಯುತ್ತಿರುವುದು ನಿನ್ನ ಬಗ್ಗೆಯೇ. ಆದರೆ ಅಷ್ಟೇನೂ ಮುಖ್ಯವಲ್ಲದ ವಿಷಯ ಬಿಡು. ನಾನು ಬರೆಯುತ್ತಿರುವ ಪತ್ರಕ್ಕಿಂತ, ಬರೆಯಲು ಬಳಸುತ್ತಿರುವ ಈ ಪೆನ್ಸಿಲ್ ಇದೆಯಲ್ಲ, ಇದೇ ಬಹಳ ಮಹತ್ವದ್ದು. ಬೆಳೆದು ದೊಡ್ಡವನಾದ ಮೇಲೆ ನೀನೂ ಈ ಪೆನ್ಸಿಲಿನಂತಾಗಬೇಕು’ ಎನ್ನುತ್ತ ಪೆನ್ಸಿಲನ್ನು ಅವನಿಗೆ ತೋರಿದಳು.ಅಜ್ಜಿಯ ಮಾತುಗಳನ್ನು ಕೇಳಿದ ಬಾಲಕನಿಗೆ ಸಣ್ಣ ಕುತೂಹಲ. ಅಜ್ಜಿಯ ಕೈಲಿದ್ದ ಪೆನ್ಸಿಲನ್ನು ಮತ್ತೂಮ್ಮೆ ದಿಟ್ಟಿಸಿದ. ಯಾವುದೋ ವಿಶೇಷವಾದ ಪೆನ್ಸಿಲ್ ಇರಬೇಕು ಎಂದುಕೊಂಡವನಿಗೆ ಅದೊಂದು ತೀರಾ ಸಾಮಾನ್ಯ ಪೆನ್ಸಿಲ್ ಎಂದು ಗೊತ್ತಾದಾಗ ಕೊಂಚ ನಿರಾಸೆಯಾಗಿತ್ತು. “ಇದರಲ್ಲಿ ವಿಶೇಷವೇನಿದೆ ಅಜ್ಜಿ? ನಾನು ದಿನನಿತ್ಯ ನೋಡುತ್ತಲೇ ಇರುವ ಅತಿ ಸಾಧಾರಣ ಪೆನ್ಸಿಲ್ಲೇ ಅಲ್ಲವಾ ಇದು?’ ಎಂದು ಕೇಳಿದವನಿಗೆ ಅಜ್ಜಿಯ ಉತ್ತರ ಏನಿರಬಹುದೋ ಎಂದು ತಿಳಿಯುವ ಕಾತುರ.
Related Articles
Advertisement
“ಪೆನ್ಸಿಲಿನಿಂದ ಬರೆದದ್ದು ತಪ್ಪಾದರೆ ತಪ್ಪನ್ನು ರಬ್ಬರಿನಿಂದ ಒರೆಸಿ ತಿದ್ದಿ ಬರೆಯಬಹುದು ಅಲ್ಲವೇ?… ಅದು ನಾವು ಕಲಿಯಬೇಕಾದ ಮೂರನೇಯ ಅಂಶ. ಬದುಕಿನ ಪಟಲದಿಂದ ಏನನ್ನಾದರೂ ಒರೆಸುವುದು ಅಥವಾ ತಿದ್ದುವುದು ಪ್ರತಿಬಾರಿಯೂ ಕೆಟ್ಟ ಸಂಗತಿಯೇ ಆಗಬೇಕೆಂದೇನಿಲ್ಲ. ತಪ್ಪುಗಳಾದಾಗ ಸಮರ್ಥಿಸಿಕೊಳ್ಳದೇ ನಿರ್ದಾಕ್ಷಿಣ್ಯದಿಂದ ಅವುಗಳನ್ನು ಬದುಕಿನಿಂದ ಒರೆಸಿಬಿಡಬೇಕು. ತಪ್ಪುಗಳನ್ನು ತಿದ್ದಿಕೊಂಡು ಬದುಕಲು ಕಲಿಯಬೇಕು. ಬಾಳಿನ ನ್ಯಾಯಮಾರ್ಗದಲ್ಲಿ ನಡೆಯಲು ಬೇಕಾದ ಬಹುಮುಖ್ಯ ಅಂಶವಿದು’ ಎಂದ ಅಜ್ಜಿ ಕೊಂಚ ಹೊತ್ತು ಸುಮ್ಮನಾದಳು. ಆಸಕ್ತಿಯಿಂದ ಕೇಳುತ್ತಿದ್ದ ಹುಡುಗ, “ನಾಲ್ಕನೆಯದ್ದು ..’? ಎಂದು ಕೇಳಿದ. ಅಜ್ಜಿಯ ಮುಖದಲ್ಲಿ ಮಂದಹಾಸ. ಹುಡುಗ ತನ್ನ ಮಾತುಗಳನ್ನು ಗಮನವಿಟ್ಟು ಆಲಿಸುತ್ತಿದ್ದಾನೆ ಎಂಬುದಕ್ಕೆ ಆಕೆಗೆ ಸಾಕ್ಷಿ ಸಿಕ್ಕಿತ್ತು. ನಾಲ್ಕನೆಯ ತತ್ವವನ್ನು ಅವಳು ಉತ್ಸಾಹದಿಂದ ವಿವರಿಸತೊಡಗಿದಳು.
“ಪೆನ್ಸಿಲ್ನ ಮೇಲ್ಮೆ„ ಎಷ್ಟೇ ಸುಂದರವಾಗಿದ್ದರೂ ಒಳಗಿನ ಸೀಸದ ಕಡ್ಡಿ ಸರಿಯಾಗಿರದಿದ್ದರೆ, ಅದಕ್ಕೊಂದು ಬೆಲೆಯಿಲ್ಲ. ಬದುಕೂ ಹಾಗೇ. ನೀನು ಎಷ್ಟೇ ಸುಂದರವಾಗಿದ್ದರೂ ನಿನ್ನಲ್ಲಿ ಒಳ್ಳೆಯ ಗುಣಗಳಿರದಿದ್ದರೆ, ನಿನ್ನದೇ ಆದ ವ್ಯಕ್ತಿತ್ವವಿರದಿದ್ದರೆ ನಿನಗ್ಯಾವ ಬೆಲೆಯೂ ಇಲ್ಲ. ಪೆನ್ಸಿಲಿನಿಂದ ಕಲಿಯಬೇಕಾದ ನಾಲ್ಕನೇ ಮಹತ್ವದ ಗುಣವಿದು’ ಎಂದಳು ಅಜ್ಜಿ. ಐದನೆಯ ತತ್ವವನ್ನು ಕೇಳಲು ಕಾತುರನಾಗಿದ್ದ ಹುಡುಗ.
ಒಮ್ಮೆ ಜೋರಾಗಿ ಉಸಿರೆಳೆದುಕೊಂಡ ಅಜ್ಜಿ, “ಏನನ್ನೇ ಬರೆದರೂ, ಅದನ್ನು ಅಕ್ಷರಗಳ ರೂಪದಲ್ಲಿ ಗುರುತು ಉಳಿಸಿಟ್ಟು ಹೋಗುತ್ತದೆ ಪೆನ್ಸಿಲ…. ಕೆಟ್ಟ¨ªೋ, ಒಳ್ಳೆಯ¨ªೋ ಗುರುತಂತೂ ಉಳಿಸುತ್ತದೆ. ನಾವು ಕಲಿಯಬೇಕಾದ ಐದನೇ ಮತ್ತು ಅತಿಮುಖ್ಯವಾದ ತತ್ವವೆಂದರೆ ಇದೇ. ಬದುಕೆಂಬ ಕಾಗದದಲ್ಲಿ ಏನನ್ನಾದರೂ ಬರೆಯುವ ಮುನ್ನ ಬಹಳ ಎಚ್ಚರಿಕೆಯಿಂದರಬೇಕು. ಸಾಧ್ಯವಾದಷ್ಟು ಒಳ್ಳೆಯದನ್ನು ಮಾತ್ರ ಬರೆಯಲು ಪ್ರಯತ್ನಿಸಬೇಕು. ಕೆಟ್ಟದ್ದು ಬರೆದುಬಿಟ್ಟರೆ ಅದರ ಗುರುತು ಉಳಿದುಹೋಗುತ್ತದೆ’ ಎಂದು ನುಡಿದು ಮಾತು ನಿಲ್ಲಿಸಿದ್ದಳು. ಅವಳ ಮಾತು ಮುಗಿದ ನಂತರ ಕ್ಷಣಕಾಲದ ಮೌನವಿತ್ತು ಅಲ್ಲಿ.
ಅಜ್ಜಿಯ ಕೈಯಿಂದ ಪೆನ್ಸಿಲ್ ಇಸಿದುಕೊಂಡ ಬಾಲಕ ಅವಳತ್ತ ನೋಡಿ ಸುಮ್ಮನೇ ನಸುನಕ್ಕ. “ಬೆಳೆದು ದೊಡ್ಡವನಾದ ಮೇಲೆ ನಾನೂ ಸಹ ಈ ಪೆನ್ಸಿಲಿನಂತಾಗುತ್ತೇನೆ ಅಜ್ಜಿ’ ಎನ್ನುತ್ತ ಪೆನ್ಸಿಲನ್ನು ಪ್ರೀತಿಯಿಂದ ಎದೆಗೊತ್ತಿಕೊಂಡ ಅವನು. ಅಜ್ಜಿಯ ಮುಖದಲ್ಲಿ ಮತ್ತದೇ ಮಂದಹಾಸ. ಒಮ್ಮೆ ಹಿತವಾಗಿ ಮೊಮ್ಮಗನ ತಲೆ ನೇವರಿಸಿದಳು ಅವಳು.
ಅನುವಾದ : ಗುರುರಾಜ ಕೊಡ್ಕಣಿ, ಯಲ್ಲಾಪುರ