Advertisement

Bribery: ಲಂಚದ ಪತ್ರ: ಕೃಷಿ ಅಧಿಕಾರಿಗಳ ವಿಚಾರಣೆ

11:43 PM Aug 10, 2023 | Team Udayavani |

ಮಂಡ್ಯ: ಸಚಿವ ಎನ್‌.ಚಲುವರಾಯಸ್ವಾಮಿ ವಿರುದ್ಧ ಲಂಚದ ಆರೋಪ ಮಾಡಿ ರಾಜ್ಯಪಾಲರಿಗೆ ಸಹಾಯಕ ಕೃಷಿ ನಿರ್ದೇಶಕರು ಬರೆದಿದ್ದಾರೆ ಎನ್ನಲಾದ ದೂರು ಅರ್ಜಿಯ ಕುರಿತ ವಿಚಾರಣೆ ಗುರುವಾರವೂ ಮುಂದುವರಿದಿದ್ದು, ಸಿಐಡಿ ತಂಡ ಕೃಷಿ ಅಧಿಕಾರಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.

Advertisement

ಗುರುವಾರವೂ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಆಗಮಿಸಿದ ಸಿಐಡಿ ಅಧಿಕಾರಿಗಳು ಜಂಟಿ ಕೃಷಿ ನಿರ್ದೇಶಕ ವಿ.ಎಸ್‌.ಅಶೋಕ್‌, ಉಪನಿರ್ದೇಶಕರು ಸಹಿತ ಜಿಲ್ಲೆಯ ಏಳು ಸಹಾಯಕ ಕೃಷಿ ನಿರ್ದೇಶಕರನ್ನು ಕರೆಸಿ ಊಟಕ್ಕೂ ಬಿಡದೆ ಸು ದೀರ್ಘ‌ ನಾಲ್ಕು ಗಂಟೆ ವಿಚಾರಣೆ ನಡೆಸಿದರು. ಸಿಐಡಿ ಅ ಧಿಕಾರಿಗಳ ಡ್ರಿಲ್‌ಗೆ ಕೃಷಿ ಅ ಧಿಕಾರಿಗಳು ಸುಸ್ತಾಗಿದ್ದಾರೆ.

ಕೃಷಿ ಅಧಿಕಾರಿಗಳ ತನಿಖೆ ನಡೆಸಿದ ಸಿಐಡಿ ಪೊಲೀಸರು ಅನಂತರ ಜಂಟಿ ಕೃಷಿ ನಿರ್ದೇಶಕ, ಉಪ ನಿರ್ದೇಶಕ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದರು. ಅಧಿಕಾರಿಗಳು ಮೊಬೈಲ್‌ನೊಂದಿಗೆ ಯಾರೊಂದಿಗೆ ಸಂಪರ್ಕದಲ್ಲಿದ್ದರು, ವಾಟ್ಸಾಪ್‌ ಮೂಲಕ ಸಂಪರ್ಕದಲ್ಲಿದ್ದರೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಯಿತು. ಪರಿಶೀಲನೆ ಬಳಿಕ ಮೊಬೈಲ್‌ಗ‌ಳನ್ನು ಅ ಧಿಕಾರಿಗಳಿಗೆ ಮರಳಿಸಲಾಯಿತು.
ಅಂಚೆ ಸಿಬಂದಿ ವಿಚಾರಣೆ

ಮೈಸೂರಿನ ಸರಸ್ವತಿಪುರಂ ಪ್ರಧಾನ ಅಂಚೆ ಕಚೇರಿಯಿಂದ ದೂರು ಅರ್ಜಿ ಹೋಗಿರುವ ಹಿನ್ನೆಲೆಯಲ್ಲಿ ಅಂಚೆ ಕಚೇರಿಯ ಸಿಬಂದಿಯನ್ನು ವಿಚಾರಣೆ ಮಾಡಲಾಯಿತು. ಮೈಸೂರಿನಿಂದ ಮಂಡ್ಯದ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಕರೆಸಿಕೊಂಡ ಸಿಐಡಿ ಅ ಧಿಕಾರಿಗಳು ಕೆಲವು ತಾಸು ವಿಚಾರಣೆ ನಡೆಸಿದರು. ಅನಂತರ ಪತ್ರವೊಂದಕ್ಕೆ ಸಿಬಂದಿಯಿಂದ ಸಹಿ ಹಾಕಿಸಿಕೊಂಡು ಕಳುಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next