Advertisement

ಸರಕಾರದಿಂದ ಭರವಸೆ ಪತ್ರ: ಪ್ರತಿಭಟನೆ ಕೈ ಬಿಟ್ಟ ಪೌರಕಾರ್ಮಿಕರು

06:00 PM Jul 04, 2022 | Team Udayavani |

ಬೆಂಗಳೂರು: ಎಲ್ಲ ಸ್ವಚ್ಛ ಕಾರ್ಮಿಕರ ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಪೌರಕಾರ್ಮಿಕರು ನಡೆಸುತ್ತಿದ್ದ ಮುಷ್ಕರ ನಾಲ್ಕನೇ ದಿನವಾದ ಸೋಮವಾರ ಅಂತ್ಯಗೊಳಿಸಲಾಗಿದೆ.

Advertisement

ಖಾಯಂ ನೇಮಕಾತಿ ಸೇರಿದಂತೆ ಹಲವು ಬೇಡಿಕೆ ಒತ್ತಾಯಿಸಿ ಪೌರಕಾರ್ಮಿಕರು. ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾಕಾರರ ಬೇಡಿಕೆಗಳನ್ನ ಈಡೇರಿಸುವ ಬಗ್ಗೆ ಪತ್ರ ಮೂಲಕ ಸರ್ಕಾರದಿಂದ ಭರವಸೆ ನೀಡಲಾಗಿದ್ದು, ಭರವಸೆ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಪ್ರತಿಭಟನೆ ಕೈಬಿಟ್ಟಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಪರವಾಗಿ ಸಫಾಯಿ ಕರ್ಮಚಾರಿ ನಿಯೋಗದ ಅಧ್ಯಕ್ಷ ಶಿವಣ್ಣ ಆಗಮಿಸಿ ಭರವಸೆ ಪತ್ರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next