Advertisement

“ಎಳವೆಯಿಂದಲೇ ಸಾಹಿತ್ಯಾಭಿರುಚಿ ಬೆಳೆಯಲಿ’

06:58 PM Apr 10, 2019 | Team Udayavani |

ಬೆಳ್ತಂಗಡಿ: ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿ ಸುವ ಚಿಗುರು ಕಾರ್ಯಾಗಾರದಲ್ಲಿ ಆಯೋಜಿಸಿದ ಚುಟುಕು ಕವನ ರಚನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಬೆಳ್ತಂಗಡಿ ತಾಲೂಕಿನ ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

Advertisement

ಅಧ್ಯಕ್ಷತೆ ವಹಿಸಿದ್ದ ಸಮಾಜಸೇವಕ ರಾಮಕೃಷ್ಣ ನಾಯ್ಕ ಪಿಂಡಿವನ ಮಾತನಾಡಿ, ತಾಂತ್ರಿಕ ಯುಗದಲ್ಲಿ ಎಳವೆ ಯಿಂದಲೇ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳುವುದು ಅವಶ್ಯ. ಶಾಲೆಗಳಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯ ಕ್ರಮ, ಸ್ಪರ್ಧೆ ಆಯೋಜಿಸಿ ಮಕ್ಕಳನ್ನು ಪ್ರೋತ್ಸಾಹಿಸುವ ಪ್ರತಿಷ್ಠಾನದ ಕೆಲಸ ಮಾದರಿ ಎಂದರು.

ಮಕ್ಕಳ ಮನಸ್ಸು ಸೂಕ್ಷ್ಮ
ಮುಖ್ಯ ಅತಿಥಿಯಾಗಿದ್ದ ಪ್ರತಿಷ್ಠಾನದ ಕಾರ್ಯಕ್ರಮ ಸಂಯೋಜಕಿ ದೇವಿಕಾ ಸುಳ್ಯ ಮಾತನಾಡಿ, ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗಿದ್ದು, ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಪರಿಸರದ ವಾತಾವರಣವನ್ನು ಅವರಿಗೆ ಒದಗಿಸಬೇಕು. ಸರಕಾರಿ ಶಾಲೆಯ ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಎಂದರು. ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ, ಅನಿತಾ ಬಿ., ಚಂದ್ರಕ್ಕಿ ಕೆ.ಪಿ., ಮನಸ್ವಿ ಉಪಸ್ಥಿತರಿದ್ದರು.

ಚುಟುಕು ರಚನೆ ಸ್ಪರ್ಧೆಯಲ್ಲಿ ಐಫಾ (ಪ್ರ), ಪವನ್‌ ಕುಮಾರ್‌ ಪಿ. (ದ್ವಿ), ಯುಕ್ತಿ (ತೃ) ಬಹುಮಾನ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next