Advertisement

ಸಮಗ್ರ ಲಿಂಗಾಯತ ಸಮಾಜ ಒಂದಾಗಲಿ: ಸಿಎಂ ಬೊಮ್ಮಾಯಿ

03:17 PM Jan 10, 2023 | Team Udayavani |

ಧಾರವಾಡ: ಸಮಗ್ರ ವೀರಶೈವ ಲಿಂಗಾಯತ ಸಮುದಾಯ ಒಳ ಪಂಗಡಗಳನ್ನು ಮರೆತು ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಲಹೆ ನೀಡಿದರು.

Advertisement

ಶ್ರಿ ಲಿಂಗರಾಜ್ ವಿವಿದುದ್ದೇಶ ಸಂಸ್ಥೆ ವತಿಯಿಂದ ನಡೆದ ಶಿರಸಂಗಿ ಲಿಂಗರಾಜರ 162 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲಿಂಗರಾಜ್ ಸರದೇಸಾಯಿ ಅವರ ಆದರ್ಶಗಳು ಲಿಂಗಾಯತ ಸಮಗ್ರ ಸಮುದಾಯಕ್ಕೆ ಮಾದರಿಯಾಗಬೇಕಿದೆ. ಲಿಂಗಾಯತ ಸಮುದಾಯದ ಶ್ರೇಷ್ಠರನ್ನು ಒಂದು ಪಂಗಡ ಅಥವಾ ಒಳ ಪಂಗಡಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು.

ಎಲ್ಲರೂ ನಿಲುಕದ ನಕ್ಷತ್ರಗಳ ಬಗ್ಗೆ ಮಾತನಾಡುತ್ತೇವೆ. ಲಿಂಗರಾಜರಂತಹ ಮಹನೀಯರ ಆದರ್ಶದಿಂದ ಬದುಕಿನಿಂದ ಸಿರಿ ಬಂದಿದೆ. ಪರಕೀಯರ ಆಡಳಿತ, ಬ್ರಿಟೀಷರ ಆಡಳಿದಲ್ಲಿ ಯಾರು ಕೂಡ ಸೇರಿರಲಿಲ್ಲ. ಎಲ್ಲವನ್ನೂ ಮೀರಿ ರಾಣಿ ಚೆನ್ನಮ್ಮ ದೈತ್ಯ ಇಂಗ್ಲೀಷರನ್ನು ಎದುರಿಸಿದರು ಎಂದರು.

12 ನೇ ಶತಮಾನದ ನಂತರ 18 ನೇ ಶತಮಾನದಲ್ಲಿ ಭಾರಿ ಬದಲಾವಣೆ ಬಂತು. ಸ್ವತಂತ್ರ ಹೋರಾಟದ ಜೊತೆಗೆ ಶಿಕ್ಷಣದಲ್ಲಿ ಬದಲಾವಣೆ ಶುರುವಾಯಿತು. ರಾಜ್ಯದಲ್ಲಿ ಲಿಂಗರಾಜ್ ಅವರು ಇಡೀ ದೇಶಗತಿಯನ್ನು ಕೊಡುಗೆಯಾಗಿ ನೀಡಿದರು. ವೀರಶೈವ ಮಹಾಸಭಾದ ಅಧ್ಯಕ್ಷತೆ ವಹಿಸಿದರು. ಹಿರಿತನ‌ ಮೆರೆದರು. ಸಮಾಜವನ್ನು ಒಗ್ಗುಡಿಸಿಕೊಂಡು‌ ಮುಂದೆ ಹೋಗೋಣಾ. ಲಿಂಗರಾಜರ ಹೆಸರು ಉಳಿಸುವ ಎಲ್ಲಾ ಕೆಲಸಗಳಿಗೂ ಎಲ್ಲಾ ಸಹಾಯ ಮಡುತೇನೆ. ಶಿರಸಂಗಿ ಲಿಂಗರಾಜ ಟ್ರಸ್ಟ್ ಅಭಿವೃದ್ದಿ ಮೂಲಕ ಇಡೀ ಸಮುದಾಯಕ್ಕೆ ನೆರವಾಗಲು ಸಹಕಾರ ನೀಡುತ್ತೆನೆ. ಇದರ ನೇತೃತ್ವ ಮಾಜಿ ಸಚಿವ ಎಂ.ಬಿ.ಪಾಟೀಲ ವಹಿಸಲಿ ಎಂದರು.

Advertisement

ಇದನ್ನೂ ಓದಿ:ಪಣಜಿ: ಕರ್ನಾಟಕ ಸರ್ಕಾರದ ವತಿಯಿಂದಲೇ ಗೋವಾದಲ್ಲಿ ಕನ್ನಡ ಭವನ ನಿರ್ಮಿಸಲು ಸಿ.ಎಂ. ಗೆ ಮನವಿ

ವೀರಶೈವ ಲಿಂಗಾಯತ ಸಮುದಾಯ ಒಟ್ಟಾಗಿ ಹೋಗೋಣ. ಕರ್ನಾಟಕದಾದ್ಯಂತ ಶೈಕ್ಷಣಿಕ ಕ್ರಾಂತಿಯಾಯಿತು ಇದು ಒಂದು ಜಾತಿಗೆ ಸೀಮಿತವಲ್ಲ ಎಂದರು.

ಬಡವರಿಗೆ ಮಠಗಳು ಆಶ್ರಯ ನೀಡಿದವು. ನಾಡು ಸಿರಿಯಾಗಲು ಉತ್ತರ ಕರ್ನಾಟಕದ ಮಠಗಳ ತ್ರಿವಿಧ ದಾಸೋಹ ಮಾಡಿವೆ. ಲಿಂಗರಾಜರ ಮಾರ್ಗದಲ್ಲಿಯೇ ಕೆಎಲ್ ಇ ಬಿ.ಎಲ್ಡಿಇ , ವಿಜಯಪುರ, ಕಲಬುರ್ಗಿ ಯಲ್ಲಿನ ಲಿಂಗಾಯತ ಶಿಕ್ಷಣ ಸಂಸ್ತೆಗಳು ಬೆಳೆದು ಹೆಮ್ಮರವಾಗಿ ಬೆಳೆದು ನಿಂತಿವೆ ಎಂದರು.

ಮಾಜಿ ಸಚಿವ ಎಂ.ಬಿ.ಪಾಟೀಲ್, ಸಚಿವ ಶಂಕರ ಪಾಟೀಲ್,ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next