Advertisement

ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲಿ

09:01 AM Aug 05, 2019 | Suhan S |

ಬೀಳಗಿ: ಕೇವಲ ಅಕ್ಷರ ಜ್ಞಾನ ಹೊಂದುವುದಷ್ಟೇ ಪರಿಪೂರ್ಣ ಶಿಕ್ಷಣವಲ್ಲ. ಸಂಸ್ಕಾರ ಭರಿತ ಸಮಾಜಮುಖೀ ಜೀವನ ನಡೆಸುವ ಕಲೆ ಕರಗತ ಮಾಡಿಕೊಂಡಾಗ ಮಾತ್ರ ವ್ಯಕ್ತಿ ಪರಿಪೂರ್ಣತೆ ಹೊಂದಲು ಸಾಧ್ಯ ಎಂದು ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ ಹೇಳಿದರು.

Advertisement

ಜಿ.ಎನ್‌.ನಿರಾಣಿ ಸರಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಹಮ್ಮಿಕೊಂಡ ಸ್ಟುಡೆಂಟ್ ಪೊಲೀಸ್‌ ಕೆಡೆಟ್ ಹಾಗೂ ಸೈಕಲ್ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಆರಕ್ಷಕ ಕೆಡೆಟ್ ಕಾರ್ಯಕ್ರಮವು ಶಾಲಾ ಆಧಾರಿತ ಅಭಿವೃದ್ಧಿ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು, ಬದ್ಧತೆ, ಸಂಯಮ, ಉತ್ಸಾಹ ಹಾಗೂ ಕಾನೂನು ಅರಿವು ನೀಡುವ ಅಪರೂಪದ ಕಾರ್ಯಕ್ರಮ ಇದಾಗಿದೆ. ಪೊಲೀಸ್‌ ಕೆಡೆಟ್ ಕಾರ್ಯಕ್ರಮವು ವಿದ್ಯಾಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಮತ್ತು ಮುಂದೆ ಪೊಲೀಸ್‌ ಹಾಗೂ ಸೈನಿಕ ಹುದ್ದೆಗೆ ಸೇರಿಕೊಳ್ಳಲು ಸಹಕಾರಿಯಾಗಲಿದೆ. ನಾಗರೀಕ ಜ್ಞಾನ ಪಡೆಯುವ ಮೂಲಕ, ದೀನ ದುರ್ಬಲರ ಸೇವೆಯ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿ ತುಂಬಿಕೊಳ್ಳಲು ಪೊಲೀಸ್‌ ಕೆಡೆಟ್ ಒಂದು ಉತ್ತಮ ಅವಕಾಶವಾಗಿದೆ ಎಂದರು.

ಪಠ್ಯೇತರ ಚಟುವಟಿಕೆಗಳಲ್ಲಿ ದೈಹಿಕ-ಮಾನಸಿಕ ಸಾಮರ್ಥ್ಯ ಬೆಳೆಸುವುದರ ಜತೆಗೆ ಶಿಸ್ತು, ಆರೋಗ್ಯ, ಸ್ವಚ್ಛತೆ ಅರಿವು ಈ ಕಾರ್ಯಕ್ರಮ ಮೂಡಿಸುತ್ತಿರುವುದು ಪ್ರಜೆಗಳಿಗೆ ವರದಾನವಾಗಿದೆ. ಪೊಲೀಸ್‌ ಕೆಡೆಟ್‌ನಲ್ಲಿ ಇಲ್ಲಿನ 44 ವಿದ್ಯಾರ್ಥಿಗಳು ಅವಕಾಶ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು.

ಶಿಕ್ಷಕ ಎಸ್‌.ಎಚ್.ಗರಡಿಮನಿ ಪ್ರಾಸ್ತಾವಿಕ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಎಚ್.ಬಿ.ಬನ್ನಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಹನುಮಂತಗೌಡ ಮಿರ್ಜಿ, ಸಿಪಿಐ ರವಿಚಂದ್ರ ಡಿ.ಬಿ., ಎಲ್.ಎಸ್‌.ನಿಂಬಾಳಕರ, ಸಂಗಪ್ಪ ಕಟಗೇರಿ, ಮಲ್ಲಪ್ಪ ಶಂಭೋಜಿ, ಹುಚ್ಚಪ್ಪ ಕೌಲಗಿ, ವಿಠuಲ ಬಾಗೇವಾಡಿ, ರಮೇಶ ಗಾಣಿಗೇರ, ವಿಠuಲ ಗಡ್ಡದ, ಶಿವಪ್ಪ ಮಸೂತಿ, ಸುನಂದಾ ಪಾಟೀಲ ಸೇರಿದಂತೆ ಇತರರು ಇದ್ದರು. ಮುಖ್ಯೋಪಾಧ್ಯಾಯ ಬಿ.ಸಿ.ಹೊಸಗೌಡರ ಸ್ವಾಗತಿಸಿದರು. ಸಿಪಿಒ ಆರ್‌.ಎಂ.ಬಾಗವಾನ ನಿರೂಪಿಸಿದರು. ಶಿಕ್ಷಕ ಬಿ.ಆರ್‌.ಮದಕಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next