Advertisement

ನ್ಯಾಯಲಯ ತೀರ್ಪಿಗೆ ಎಲ್ಲರೂ ಗೌರವ ಕೊಡೋಣ, ಶಾಂತಿ ಕಾಪಾಡೋಣ: ಸಿಎಂ ಬೊಮ್ಮಾಯಿ

10:08 AM Feb 10, 2022 | Team Udayavani |

ಬೆಂಗಳೂರು: ಕಾನೂನಿಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ಎಲ್ಲಾ ಸಂಘಟನೆಗಳ ಕರ್ತವ್ಯ. ನ್ಯಾಯಾಲಯದ ತೀರ್ಪಿಗೆ ಕಾಯೋಣ. ನ್ಯಾಯಲಯ ತೀರ್ಪಿಗೆ ಎಲ್ಲರೂ ಗೌರವ ಕೊಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಸಮವಸ್ತ್ರಗಳ ಬಗ್ಗೆ ತ್ರೀ ಸದಸ್ಯ ಪೀಠಕ್ಕೆ ವರ್ಗಾವಣೆಯಾಗಿದೆ. ಮಧ್ಯಾಹ್ನ 2:30 ಕ್ಕೆ ವಿಚಾರಣೆ ಆರಂಭವಾಗಲಿದೆ. ವಿದ್ಯಾರ್ಥಿಗಳು ನಡುವೆ ಯಾವುದೇ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಸಮವಸ್ತ್ರ ಮಾಡಲಾಗಿದೆ. ಈ ವಿಷಯದಲ್ಲಿ ಯಾರ್ಯಾರು ಏನೇನೋ ಹೇಳಿಕೆಗಳನ್ನು ಕೊಡಬೇಕು ಕೊಟ್ಟಿದ್ದಾರೆ. ಇನ್ನು ಮೇಲೆ ನಮ್ಮಷ್ಟಕ್ಕೆ ನಾವೇ ಮಾತನಾಡದೇ ಶಾಂತಿ ಕಾಪಡುವ ಕೆಲಸ ಮಾಡೋಣ ಎಂದರು.

ಇದನ್ನೂ ಓದಿ:ಸಂಸತ್ತಲ್ಲೂ ಹಿಜಾಬ್‌ ಬಿಸಿ ; ವಿಪಕ್ಷಗಳ ಸಭಾತ್ಯಾಗ , ಸರಕಾರದ ಪ್ರತಿಕ್ರಿಯೆಗೆ ಸಂಸದರ ಪಟ್ಟು

ಸಾಯಂಕಾಲ ಶಿಕ್ಷಣ ಇಲಾಖೆ ಹಾಗೂ ಗೃಹ ಇಲಾಖೆ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ಕರೆದಿದ್ದೇನೆ. ಈವರಿಗಿನ ಬೆಳವಣಿಗೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಶಾಲಾ ಕಾಲೇಜುಗಳಲ್ಲಿ ಶಾಂತಿ ಸೌಹಾರ್ದತೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುತ್ತೇನೆ. ಕಾಲೇಜು ರಜೆ ವಿಸ್ತರಣೆ ಬಗ್ಗೆ ಸಂಜೆ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next