Advertisement
ಫೆ.17ರಿಂದ ಅಂಬಲಪದವು ಪರಿಸರದ ಶಾಂತಾ ಮತ್ತು ಶೀನ ಮೂಲ್ಯ ಅವರ ದನ ಮೇಯಲು ಬಿಟ್ಟಲ್ಲಿಂದ ನಾಪತ್ತೆಯಾಗಿದ್ದು, ಶೀನ ಮೂಲ್ಯ ಅವರ ದನದ ಕಳೇಬರ ಫೆ.21ರಂದು ಪಕ್ಕದ ಗುಡ್ಡದಲ್ಲಿ ಅರ್ಧ ತಿಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಶಾಂತಾ ಅವರ ಮನೆಯ ದನ ಇನ್ನೂ ಪತ್ತೆಯಾಗಿಲ್ಲ.
ಚಿರತೆ ಸೆರೆಹಿಡಿಯಲು ಗೂಡನ್ನು ಅಳವಡಿಸಬೇಕೆನ್ನುವ ಬೇಡಿಕೆ ಇಲ್ಲಿನವರದ್ದು. ಗೂಡು ಅಳವಡಿಸಲು ಅರಣ್ಯ ಇಲಾಖೆ ಮುಂದಾಗಬೇಕೆಂಬ ಆಗ್ರಹ ವ್ಯಕ್ತಪಡಿಸುತ್ತಾರೆ ಶಿವಾನಂದರು.
Related Articles
ಚಿರತೆ ಕಂಡೊಡನೆ ದೂರದ ಪಿಲಿಕುಳ ನಿಸರ್ಗಧಾಮಕ್ಕೆ ಮಾಹಿತಿ ನೀಡಿ ಅಲ್ಲಿನ ತಜ್ಞರು ಆಗಮಿಸುವಾಗ ಸಾಕಷ್ಟು ತಡವಾಗುತ್ತಿದೆ. ಹೀಗಾಗಿ ಕಾರ್ಕಳದಲ್ಲೇ ತಜ್ಞರು, ಅರಿವಳಿಕೆ ಗನ್ನು, ಮದ್ದು ಲಭ್ಯವಿದ್ದಲ್ಲಿ ಬಹಳ ಪ್ರಯೋಜನಕಾರಿಯಾಗಲಿದೆ. ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪ್ರಸ್ತಾವ ಮಾಡಲಾಗಿದೆ. ಜಿಲ್ಲಾಧಿಕಾರಿ, ಶಾಸಕರು, ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದು ಗಮನ ಸೆಳೆಯಲಾಗಿದೆ. ಎಂದು ಕಾಂತಾವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಕೋಟ್ಯಾನ್ ಹೇಳಿದರು.
Advertisement
ಚಿರತೆ ಜನರಿಗೆ ಹೆದರುತ್ತೆ. ಅರಣ್ಯದಲ್ಲಿ ಆಹಾರ ಸಿಗದಿದ್ದಾಗ ಅವು ನಾಡಿನತ್ತ ಧಾವಿಸುತ್ತೆ. ಕಾರ್ಕಳ ಪರಿಸರದ ಕೆಲವೆಡೆ ಚಿರತೆ ಗೂಡು ಅಳವಡಿಸಲಾಗಿದೆ ಎಂದು ಮೂಡಬಿದಿರೆ ವಲಯ ಅರಣ್ಯಾಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.