Advertisement

ಬಂಡೀಪುರ: ರೆಸಾರ್ಟ್‍ಗೆ  ನುಗ್ಗಿದ ಚಿರತೆ

06:05 PM Aug 31, 2021 | Team Udayavani |

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನ ಮಂಗಲ ಗ್ರಾಮದ ಬಳಿ ಇರುವ ವಿಂಡ್ ಫ್ಲವರ್ ಖಾಸಗಿ ರೆಸಾರ್ಟ್ ಒಳಗೆ ಮಂಗಳವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಚಿರತೆ

Advertisement

ರೆಸಾರ್ಟ್‍ನ ರಿಸೆಪ್ಸನ್ ಕೌಂಟರ್ ನಲ್ಲಿ ಬಾಗಿಲು ಇಲ್ಲದ ಪರಿಣಾಮ ಚಿರತೆ ಮೆಲ್ಲಗೆ ಒಳ ನುಗಿದ್ದು, ಇದನ್ನು ಕಂಡ ಸಿಬ್ಬಂದಿ ಭಯ ಭೀತರಾಗಿದ್ದಾರೆ. ಈ ದೃಶ್ಯ ರೆಸಾರ್ಟ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ರೆಸಾರ್ಟ್ ಬಂಡೀಪುರ ಕಾಡಂಚಿನಲ್ಲಿ ಇರುವುದರಿಂದ ಒಳಗೆ ಚಿರತೆ ನುಗ್ಗಿದೆ. ಇಂತಹ ಘಟನೆಗಳು ಈ ಭಾಗದಲ್ಲಿ ಸಾಮಾನ್ಯ. ಕೆಲವೊಮ್ಮ ರೆಸಾರ್ಟ್‍ನಲ್ಲಿರುವ ನಾಯಿಗಳನ್ನು ತಿನ್ನಲು ಬರುತ್ತವೆ ಎಂದು ಸ್ಥಳೀಯರಾದ ರವಿಕುಮಾರ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next