Advertisement

ಹಾವಂಜೆ, ಕೀಳಂಜೆ ಪರಿಸರದಲ್ಲಿ ಚಿರತೆ ಹಾವಳಿ… ಸ್ಥಳೀಯರಲ್ಲಿ ಆತಂಕ

11:08 PM May 11, 2023 | Team Udayavani |

ಮಣಿಪಾಲ: ಹಾವಂಜೆ, ಕೀಳಂಜೆಯ ಪರಿಸರದಲ್ಲಿ ಸಾಕು ನಾಯಿಗಳನ್ನು ತಿನ್ನುವ ಚಿರತೆಯ ಕಾಟ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Advertisement

ಸ್ಥಳೀಯರಾದ ಗಣಪತಿ ನಾಯಕ್‌, ಜಯಶೆಟ್ಟಿ ಬನ್ನಂಜೆ ಅವರ ಮನೆಯಲ್ಲಿ ಸಾಕಿದ ಸಾಕುನಾಯಿಗಳ ಮೇಲೆ ಚಿರತೆಯು ರಾತ್ರಿಯ ಹೊತ್ತಿನಲ್ಲಿ ದಾಳಿ ನಡೆಸಿದೆ.

ಈ ಪರಿಸರದಲ್ಲಿ ಅರಣ್ಯ ಇಲಾಖೆಯ ಅಕೇಶಿಯ ಮರದ ತೋಪುಗಳಿದ್ದು, ಸಾಕಷ್ಟು ಮನೆಗಳಿವೆ. ಈ ಹಿಂದೆ ಇಲ್ಲಿನ ನಾಗರಿಕರು ಕಾಡು ಕೋಣ ಹಾವಳಿಯಿಂದ ಸಮಸ್ಯೆ ಅನುಭವಿಸಿದ್ದರು. ಪ್ರಸ್ತುತ ಚಿರತೆಯ ಹಾವಳಿಯಿಂದ ಸ್ಥಳೀಯರು ಆತಂಕಿತರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next