Advertisement

ಚಿರತೆಗೆ ಆಹಾರವಾದ ಅಂಗಳದಲ್ಲಿದ್ದ ನಾಯಿ !

12:22 AM Feb 27, 2023 | Team Udayavani |

ಬ್ರಹ್ಮಾವರ: ಬಾರ್ಕೂರಿನ ಹೊಸಾಳ ಗ್ರಾಮದ ಸೀತಾ ಪೂಜಾರ್ತಿ ಅವರ ಸಾಕು ನಾಯಿಯನ್ನು ಶನಿವಾರ ತಡರಾತ್ರಿ ಮನೆಯಂಗಳದಲ್ಲಿ ಚಿರತೆ ಬೇಟೆಯಾಡಿದೆ. ಈ ಘಟನೆಯು ರವಿವಾರ ಬೆಳಗ್ಗೆ ಮನೆಯವರ ಗಮನಕ್ಕೆ ಬಂದಿದೆ.

Advertisement

ನಾಯಿಯ ಅಂಗಾಂಗಳಾದ ಕಾಲು, ದೇಹದ ಇತರ ಭಾಗಗಳನ್ನು ಅಲ್ಲಿಯೇ ಬಿಟ್ಟು ಹೋಗಿದೆ. ಬಾರ್ಕೂರಿನ ಜನನಿಬಿಡ ಪ್ರದೇಶದಲ್ಲಿ ಚಿರತೆ ಸಂಚಾರ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ. ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅರಣ್ಯ ಇಲಾಖೆಯು ಘಟನ ಸ್ಥಳದ ಸಮೀಪ ಚಿರತೆ ಸೆರೆಗಾಗಿ ಬೋನು ಇರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next