Advertisement
ಹೌದು, ಊರಿನವರ ಎದೆಯಲ್ಲಿ ಡವಡವ. ಬೆಳಗ್ಗೆ 9.30ರ ಸಮಯ. ಚುಮುಚುಮು ಚಳಿಯ ನಡುವೆ ಬೆಚ್ಚಗೆ ಮನೆಯೊಳಗೆ ಕುಳಿತಿದ್ದ ವಿನುತಾಗೆ ಮನೆಯ ಗೇಟ್ ಬಡಿದ ಸದ್ದು. ಹೊರಬಂದು ಬಾಗಿಲು ತೆರೆದರೆ ಚಿರತೆಯೊಂದು ಮೈಮೇಲೆ ಎರಗುತ್ತಿದೆಯೇನೋ ಎನ್ನುವಂತೆ ಒಳನುಗ್ಗಿಯೇಬಿಟ್ಟಿತು. ಗಾಬರಿಯಾದ ವಿನುತಾ ಕಿರುಚಾಡುತ್ತಾ ಮನೆಯೊಳಗೆ ಓಡಿದ್ದಾಳೆ.
ನಿರ್ಮಾಣ ಹಂತದ ಕಟ್ಟಡದಲ್ಲಿ ಕುಳಿತಿದ್ದ ಚಿರತೆ ಜನರ ಸದ್ದ ಕೇಳಿ ಗಾಬರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಗೋವಿಂದರಾಜ್ ಎಂಬುವರನ್ನು ಗಾಯಗೊಳಿಸಿ ಬಳಿಕ ಮನೆಯೊಳಗೆ ನುಗ್ಗಿತ್ತು. ಇಷ್ಟೆಲ್ಲಾ ಘಟನೆ ಬಳಿಕ ರಂಗನಾಥ್ ಅವರು ಅರಣ್ಯಾಧಿಕಾರಿಗಳು ಹಾಗೂ ಪೊಲೀಸರಿಗೆ ಸುದ್ದಿ ತಲುಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ತಜ್ಞರು ಸತತ 9 ತಾಸುಗಳ ಕಾರ್ಯಾಚರಣೆ ಬಳಿಕ ಅದನ್ನು ಸೆರೆ ಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗಿಸಿದ್ದಾರೆ.