Advertisement

ಕೊಳೆತ ಸ್ಥಿತಿಯಲ್ಲಿ ಚಿರತೆಯ ಮೃತ ದೇಹ ಪತ್ತೆ

12:54 PM Nov 12, 2018 | |

ಬಜ್ಪೆ: ಎಕ್ಕಾರು ಅಗರಿಗುತ್ತು ಕಾಡಿನಲ್ಲಿ ಸೋಮವಾರ ಮಧ್ಯಾಹ್ನ  ಗಂಡು ಚಿರತೆಯ ಮೃತ ದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು ಐದು- ಆರು ದಿನಗಳ ಹಿಂದೆ ಚಿರತೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

Advertisement

ಎಕ್ಕಾರು ಭಾಗದಲ್ಲಿ ಈ ಹಿಂದೆ ಕೂಡ ಚಿರತೆ ಹಾವಳಿ ಕಂಡು ಬಂದಿತ್ತು. ಸಹಜ ಸಾವು ಸಂಭವಿಸಿರ ಬಹುದು ಎಂದು ಊಹಿಸಲಾಗಿದೆ.  ಚಿರತೆಗೆ 9 – 10 ವರ್ಷ ಪ್ರಾಯವಾಗಿರಬಹುದು ಎಂದು ಅಂದಾಜಿಸಲಾಗಿದೆ. 


ಮರಣೋತ್ತರ ಪರೀಕ್ಷೆ ನಂತರ ಸ್ಥಳದಲ್ಲೇ ಶವವನ್ನು ಸುಡಲಾಯಿತು. ಮಂಗಳೂರು ವಲಯ ಅರಣ್ಯ ಇಲಾಖೆ ರೆಂಜೆರ್ ಶ್ರೀಧರ್, ಫಾರೆಸ್ಟರ್ ಜಯರಾಜ್, ಎಕ್ಕಾರು ಗ್ರಾಮ ಪಂಚಾತ್ ಅಧ್ಯಕ್ಷ್ಯ ಸುರೇಶ್ ಶೆಟ್ಟಿ ಸ್ಥಳದಲ್ಲಿ ಉಪಸ್ಥಿತರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next