Advertisement

ರಾಮನಗರ: ಬೋನಿಗೆ ಬಿದ್ದ ಗಂಡು ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

11:05 AM May 16, 2023 | Team Udayavani |

ರಾಮನಗರ: ಹಲವು ದಿನಗಳಿಂದ ಅರೆಗಡಕಲು ಗ್ರಾಮದ ಸುತ್ತಮುತ್ತ ಉಪಟಳ ನೀಡುತ್ತಿದ್ದ ಗಂಡು ಚಿರತೆಯೊಂದು ಬೋನಿಗೆ ಬಿದ್ದ ಘಟನೆ ನಡೆದಿದೆ.

Advertisement

ಎರಡು ದಿನದ ಹಿಂದೆ ಹಾರೋಹಳ್ಳಿ ತಾಲೂಕಿನ ಅರೆಗಡಕಲು ಗ್ರಾಮದಲ್ಲಿನ ತೋಟವೊಂದರಲ್ಲಿ ಅರಣ್ಯ ಇಲಾಖಾ ಸಿಬ್ಬಂದಿ ಬೋನು ಇರಿಸಿದ್ದರು. ಮಂಗಳವಾರ ಬೆಳಿಗ್ಗೆ ಚಿರತೆ ಬೋನಿಗೆ ಬಿದ್ದಿದೆ.

ಇದನ್ನೂ ಓದಿ:16 ಶಾಸಕರು ಅನರ್ಹರಾದರೂ ಶಿಂಧೆ ಸರ್ಕಾರ ಉರುಳಲ್ಲ..: ಅಜಿತ್ ಪವಾರ್

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುರಕ್ಷಿತ ಸ್ಥಳಕ್ಕೆ ಚಿರತೆ ರವಾನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next