Advertisement

ನಾಯಿ ಬೇಟೆಗೆ ಬಂದು ಬೋನಿಗೆ ಬಿದ್ದ ಚಿರತೆ

06:58 PM Sep 16, 2021 | Team Udayavani |

ಕುಮಟಾ: ಆಹಾರ ಅರಸಿ ಬಂದಿದ್ದ ಚಿರತೆಯೊಂದು ಬೋನಿನಲ್ಲಿ ಇದ್ದ ನಾಯಿ ಹಿಡಿಯಲು ಹೋಗಿ ಬಂಧಿಯಾದ ಘಟನೆ ತಾಲೂಕಿನ ಕಿಮಾನಿಯಲ್ಲಿ ಗುರುವಾರ ನಡೆದಿದೆ.

Advertisement

ರಾತ್ರಿ ನಾಯಿ ಬೇಟೆಗೆ ಬಂದಿದ್ದ ಚಿರತೆ ಬೋನಿನೊಳಗೆ ಹೋಗಿದ್ದನ್ನು ಗಮನಿಸಿದ ಮನೆಯ ಮಾಲೀಕರು ತಕ್ಷಣ ಅದನ್ನು ಲಾಕ್ ಮಾಡಿದ್ದಾರೆ. ಈ ವೇಳೆಗಾಗಲೇ ಬೋನಿನಲ್ಲಿದ್ದ ನಾಯಿ ತಪ್ಪಿಸಿಕೊಂಡಿತ್ತು. ತಕ್ಷಣ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಚಿರತೆಯನ್ನು ಹಿಡಿದು ಸುರಕ್ಷತೆ ಸ್ಥಳಕ್ಕೆ ಸ್ಥಳಾಂತರಿಸಿದರು.

ಈ ವೇಳೆ ಎಸಿಎಫ್ ಗುರುದಾಸ ಶೇಟ್, ಆರ್‍ಎಫ್ಒ ನರೇಶ್ ಹಾಗೂ ವನ್ಯಜೀವಿ ಸಂರಕ್ಷಕರಾದ ಅಶೋಕ್ ನಾಯ್ಕ‌ ತದಡಿ, ಪವನ ನಾಯ್ಕ ಕುಮಟಾ, ಮಹೇಶ ನಾಯ್ಕ ಅಂಕೋಲಾ ಇವರು ಚಿರತೆ ಸೆರೆಹಿಡಿಯುವಲ್ಲಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next