Advertisement

ಚಿರತೆ ದಾಳಿಗೆ ಮಹಿಳೆ ಬಲಿ 

06:30 AM Jan 19, 2018 | Team Udayavani |

ರಾಮನಗರ: ಹಸು ಮೇಲೆ ದಾಳಿ ಮಾಡಿದ ಚಿರತೆಗೆ ಪ್ರತಿರೋಧ ಒಡ್ಡಿದ ಮಹಿಳೆಯ ಮೇಲೆ ಎರಗಿದ ಚಿರತೆಯೊಂದು ಆಕೆಯನ್ನು ಬಲಿತೆಗೆದುಕೊಂಡ ಘಟನೆ ತಾಲೂಕಿನ ಚಿಕ್ಕಸೂಲಿಕರೆ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. 

Advertisement

ಗ್ರಾಮದ ಪುಟ್ಟಹಲಗಮ್ಮ (40) ಚಿರತೆ ದಾಳಿಗೆ ಬಲಿಯಾಗಿರುವ ಮಹಿಳೆ. ಹಸುಗಳನ್ನು ಮೇಯಿಸಲು ಗ್ರಾಮದ ಬಳಿ ಇರುವ ಅರಣ್ಯ ಪ್ರದೇಶಕ್ಕೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಹಸುವೊಂದರ ಮೇಲೆ ಎರಗಿದ ಚಿರತೆಯನ್ನು ಕಂಡ ಪುಟ್ಟಹಲಗಮ್ಮ ಕೂಗಿಕೊಂಡು ಚಿರತೆಗೆ ಪ್ರತಿರೋಧ ಒಡ್ಡಿದರು. ಇದರಿಂದ ಆಕ್ರೋಶಗೊಂಡ ಚಿರತೆ ಹಸುವನ್ನು ಬಿಟ್ಟು ಪುಟ್ಟಹಲಗಮ್ಮನ ಮೇಲೆ ಎರಗಿತು. ತಕ್ಷಣ ಅಲ್ಲೇ ಇದ್ದ ಈಕೆಯ ಪತಿ ಶಿವಪ್ಪಕಿರುಚಾಡಿದರು. ಕೂಗಾಟ ಕೇಳಿ ಗ್ರಾಮಸ್ಥರು ಆಗಮಿಸಿದರಾದರೂ ಅಷ್ಟರಲ್ಲಾಗಲೆ ಚಿರತೆ ಪುಟ್ಟಹಲಗಮ್ಮ ಅವರ ದೇಹವನ್ನು ಕಚ್ಚಿಕೊಂಡು ಕರಡಿ ಹಳ್ಳದ ಬಳಿಯ ಗವಿಯ ಬಳಿಗೆ ಎಳೆದೊಯ್ದಿತ್ತು. ಬಳಿಕ, ಜನರ ಕೂಗಾಟ ಕೇಳಿ ಚಿರತೆ ದೇಹವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next