Advertisement

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಿರತೆ ದಾಳಿ, ನೆರವಿಗೆ ಬಂದ ಸಾಕು ನಾಯಿಗಳು

09:00 PM Apr 09, 2022 | Team Udayavani |

ಸೊರಬ: ಚಿರತೆ ದಾಳಿಯಿಂದ ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ಶನಿವಾರ ನಡೆದಿದೆ.

Advertisement

ಎಣ್ಣೆಕೊಪ್ಪ ಗೊಲ್ಲರತಾಂಡದ ಬಂಗಾರಪ್ಪ ಗಿಡ್ಡತಿಮ್ಮಣ್ಣ (60) ಗಾಯಗೊಂಡ ವ್ಯಕ್ತಿ.

ಕಾಡಂಚಿನ ಪ್ರದೇಶದ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ಆದರೆ, ಬಂಗಾರಪ್ಪ ಅವರ ಜೊತೆಯಲ್ಲಿದ್ದ ಸಾಕು ನಾಯಿಗಳ ಬೊಗಳುವಿಕೆಗೆ ಚಿರತೆ ಕಾಲ್ಕಿತ್ತಿದೆ.

ಗಾಯಾಳುವನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆನವಟ್ಟಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಅಸಾರಾಮ್‌ ಬಾಪು ಪ್ರಕರಣ : ಸಂತ್ರಸ್ತೆ ಕುಟುಂಬಕ್ಕೆ ಬೆದರಿಕೆ, ಪೊಲೀಸರಿಂದ ಭದ್ರತೆ

Advertisement
Advertisement

Udayavani is now on Telegram. Click here to join our channel and stay updated with the latest news.

Next