Advertisement

ಲಿಂಬೆ ಹಣ್ಣು ಹಿಡಿದು ಓಡಾಡಿದ ಸಿದ್ದರಾಮಯ್ಯ 

01:13 AM Feb 28, 2019 | |

ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಕಾಂಗ್ರೆಸ್‌ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೈಯಲ್ಲಿ ಹಿಡಿದಿದ್ದ ಲಿಂಬೆ ಹಣ್ಣು ಎಲ್ಲರ ಗಮನ ಸೆಳೆಯಿತು.

Advertisement

ನಗರದ ಸೈನಿಕ ಶಾಲೆ ಆವರಣದಲ್ಲಿರುವ ಹೆಲಿಪ್ಯಾಡ್‌ನ‌ಲ್ಲಿ ಹೆಲಿಕಾಪ್ಟರ್‌ನಿಂದ ಲಿಂಬೆ ಹಣ್ಣು ಹಿಡಿದೇ ಇಳಿದ ಸಿದ್ದರಾಮಯ್ಯ, ಲಿಂಬೆ ಹಣ್ಣು ಹಿಡಿದುಕೊಂಡೇ ಕಾರಿನಲ್ಲಿ ಸಮಾವೇಶ ನಡೆಯುವ ಸ್ಥಳಕ್ಕೆ ತೆರಳಿದರು. ಮೂಢನಂಬಿಕೆ ವಿರೋಧಿ ಸುತ್ತಲೇ ಪ್ರಗತಿಪರ ಮನೋಭಾವ ಪ್ರದರ್ಶಿಸುವ ಸಿದ್ದರಾಮಯ್ಯ ಅವರು ಕೈಯಲ್ಲಿ ಲಿಂಬೆ ಹಣ್ಣು ಹಿಡಿದೇ ಓಡಾಡಿದ್ದು ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next