Advertisement

ಪರಿಷತ್‌ ಸದಸ್ಯರಿಗೆ ಪ್ರಮಾಣ ವಚನ

10:38 PM Jun 16, 2022 | Team Udayavani |

ಬೆಂಗಳೂರು: ರಾಜ್ಯ ವಿಧಾನ ಪರಿಷತ್‌ಗೆ ವಿಧಾನಸಭೆಯಿಂದ  ಆಯ್ಕೆಯಾದ ಬಿಜೆಪಿಯ ಲಕ್ಷಣ ಸವದಿ, ಛಲವಾದಿ ನಾರಾಯಣ ಸ್ವಾಮಿ, ಕೇಶವ ಪ್ರಸಾದ್‌, ಹೇಮಲತಾ, ಕಾಂಗ್ರೆಸ್‌ನ  ನಾಗರಾಜ್‌ ಯಾದವ್‌, ಅಬ್ದುಲ್‌ ಜಬ್ಬಾರ್‌ ಹಾಗೂ ಜೆಡಿಎಸ್‌ನ ಟಿ.ಎ. ಶರವಣ ಅವರಿಗೆ ಗುರುವಾರ ರಘುನಾಥ್‌ ರಾವ್‌ ಮಲ್ಕಾಪುರೆ ಪ್ರಮಾಣವಚನ ಬೋಧಿಸಿದರು.

Advertisement

ಅಬ್ದುಲ್‌ ಜಬ್ಬಾರ್‌ ಅಲ್ಲಾ ಹೆಸರಿನಲ್ಲಿ, ನಾಗರಾಜ್‌  ಭಗವಂತನ ಹೆಸರಿನಲ್ಲಿ,  ನಾರಾಯಣ ಸ್ವಾಮಿ  ಅಂಬೇಡ್ಕರ್‌ ಹೆಸರಿನಲ್ಲಿ, ಹೇಮಲತಾ  ವಾಲ್ಮೀಕಿ ಹೆಸರಿನಲ್ಲಿ, ಲಕ್ಷ್ಮಣ ಸವದಿ ಹಾಗೂ ಕೇಶವ ಪ್ರಸಾದ್‌ ಭಗವಂತನ ಹೆಸರಿನಲ್ಲಿ, ಶರವಣ ಶಿರಡಿ ಸಾಯಿಬಾಬ ಹಾಗೂ ತಿರುಪತಿ ವೆಂಕಟೇಶ್ವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಸಚಿವರಾದ ಆರ್‌ ಅಶೋಕ್‌, ಕೋಟ  ಶ್ರೀನಿವಾಸ್‌ ಪೂಜಾರಿ, ಕಾಂಗ್ರೆಸ್‌ನ ಸಚೇತಕ ಪ್ರಕಾಶ್‌ ರಾಥೋಡ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next