Advertisement

ಓವೈಸಿ ಪಕ್ಷ ತೊರೆದು ಪ್ರಿಯಾಂಕ್ ಖರ್ಗೆ ”ಕೈ”ಹಿಡಿದ ಟೀಂ

04:06 PM Oct 05, 2022 | Team Udayavani |

ವಾಡಿ: ಪಟ್ಟಣದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕ್ರಿಯಾಶೀಲವಾಗಿದ್ದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿ ಮೂಲಕ ಕೈ ಬಲಪಡಿಸಿದ್ದಾರೆ.

Advertisement

ಇದನ್ನೂ ಓದಿ : ಎಲ್‌ಸಿಡಿ ಟಿವಿ ಸ್ಫೋಟ : 16 ವರ್ಷದ ಬಾಲಕ ಸಾವು, ಇಬ್ಬರಿಗೆ ಗಾಯ

ಮಂಗಳವಾರ ಬೆಂಗಳೂರಿನಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಧ್ವಜ ಹಿಡಿದು ಅಧಿಕೃತವಾಗಿ ಪಕ್ಷ ಸೇರಿದ್ದು, ಇದರಿಂದಾಗಿ ಪಟ್ಟಣದ ಎಐಎಂಐಎಂ ಸಂಘಟನೆಯ ಕಚೇರಿಗೆ ಬೀಗ ಬಿದ್ದಿದೆ.

ಎಐಎಂಐಎಂ ಸಂಘಟನೆಯ ವಾಡಿ ಬ್ಲಾಕ್ ಅಧ್ಯಕ್ಷ ಹರೂನ್ ಖುರೇಶಿ, ನಗರ ಅಧ್ಯಕ್ಷ ಸುಖೂರ್ ತೇಲಿ, ಯುವ ಘಟಕದ ಅಧ್ಯಕ್ಷ ಮೈನೂದ್ದೀನ್ ಸಾಯೀದ್, ಮುಖಂಡರಾದ ಝಹೂರ್ ಖಾನ್, ಜುಬೇರ ಅಹ್ಮದ್, ಎಜಾಜ್ ಅಹ್ಮದ್, ಮಹ್ಮದ್ ಗೌಸ್, ಅಕೀಬ್ ಸಾಹೇಬಾಜ್, ಇರ್ಫಾನ್ ಪಟೇಲ್, ತೌಸೀಫ್ ನವಾಜ್, ತೌಸೀಫ್, ಬಾಶುಮಿಯ್ಯಾ, ಮಹ್ಮದ್ ಗೌಸ್ ಇಂಗಳಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next