Advertisement

ಎಡರಂಗ ಎಣ್ಮಕಜೆ ಪಂಚಾಯತ್‌ ಮಟ್ಟದ ಚುನಾವಣ ರ‍್ಯಾಲಿ

09:02 PM Apr 20, 2019 | sudhir |

ಕುಂಬಳೆ: ಎಡರಂಗ ಎಣ್ಮಕಜೆ ಪಂಚಾಯತ್‌ ಮಟ್ಟದ ಚುನಾವಣ ರ‍್ಯಾಲಿಯು ಪೆರ್ಲದಲ್ಲಿ ನಡೆಯಿತು. ತೃಕ್ಕರಿಪ್ಪುರ ಶಾಸಕ ಎಂ ರಾಜಗೋಪಾಲನ್‌ ಉದ್ಘಾಟಿಸಿ ಮಾತನಾಡಿ ಕಾಸರಗೋಡು ಲೋಕಸಭಾ ಕ್ಷೇತ್ರದ ಎಡರಂಗದ ಅಭ್ಯರ್ಥಿ ಕೆ.ಪಿ.ಸತೀಶ್ಚಂದ್ರನ್‌ ಅವರಿಗೆ ಮತ ಯಾಚಿಸಿದರು.ಎಡರಂಗ ಪಂಚಾಯತ್‌ ಸಮಿತಿ ಅಧ್ಯಕ್ಷ ನರಸಿಂಹ ಪೂಜಾರಿ ಅಧ್ಯಕ್ಷತೆ ವಹಿಸಿದರು.ಎಡರಂಗ ನಾಯಕರಾದ ಗೋವಿಂದನ್‌ ಪಳ್ಳಿಕಾಪಿಲ್‌, ವಿ.ಪಿ.ಪಿ. ಮುಸ್ತಫಾ, ಪಿ.ಕೆ. ಮಂಜುನಾಥ, ಕೆ. ಸಬೀಶ್‌, ವಿ. ವಿನೋದ್‌, ಜಿ. ಚಮದ್ರಮೋಹನ, ಕೆ. ಶಶಿ, ಕೆ.ಕೆ.ಅಬ್ದುಲ್ಲ ಕುಂಞಿ ಭಾಗವಹಿಸಿ ಮಾತನಾಡಿದರು.ಕೆ.ಸುಧಾಕರ ಮಾಸ್ಟರ್‌ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next