Advertisement

ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ

06:52 PM Nov 07, 2021 | Team Udayavani |

ಹೊನ್ನಾವರ: ಚಂದಾವರ ಪಂಚಾಯತ್‌ ವ್ಯಾಪ್ತಿಯ ಮಹಾತ್ಮಾಗಾಂಧಿ ಸ್ವರಾಜ್‌ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖ ಮುಖಂಡರು ಕಾಂಗ್ರೆಸ್‌ ಸೇರ್ಪಡೆಗೊಂಡರು. ಚಂದಾವರ ಗ್ರಾಪಂ ಸದಸ್ಯ ಹನಮಂತ ನಾಯ್ಕ, ಕಡ್ನಿರು ಗ್ರಾಪಂ ಸದಸ್ಯ ವಿನಯಕುಮಾರ ನಾಯ್ಕ, ಹೊದ್ಕೆಶಿರೂರು ಶಂಭು ಮಾದೇವ ನಾಯ್ಕ, ಶ್ರೀಧರ ಶಿವಪ್ಪ ನಾಯ್ಕ, ಕಡ್ಲೆ ಗ್ರಾಮದ ಮುಖಂಡರಾದ ಪ್ರವೀಣ ನಾಗೇಶ ನಾಯ್ಕ, ಸುರೇಶ ದಾಮೋದರ ನಾಯ್ಕ, ಗಣೇಶ ಆಚಾರಿ ಇನ್ನೂ ಮುಂತಾದವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.

Advertisement

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ, ಹೊನ್ನಾವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಗದೀಪ್‌ ಎನ್‌. ತೆಂಗೇರಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ಬಿಜೆಪಿಯ ಎಲ್ಲ ಪ್ರಮುಖರಿಗೆ ಪಕ್ಷದ ಶಾಲು ಹಾಕಿ ಸ್ವಾಗತಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕಿ ಶಾರದಾ ಶೆಟ್ಟಿ, ಮಹಾತ್ಮಾಗಾಂಧಿ ಗ್ರಾಮ ಸ್ವರಾಜ್‌ ಬಗ್ಗೆ ಮತ್ತು ದೇಶ, ದೇಶದ ಸ್ವಾತಂತ್ರÂಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಸ್ವಾಂತಂತ್ರ್ಯ ಯೋಧರ ಕುರಿತು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಜನತೆಗೆ ತಿಳಿಹೇಳುವ ಕೆಲಸ ಮಾಡುವಂತೆ ವಿನಂತಿಸಿದರು. ಹೊನ್ನಾವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಗದೀಪ್‌ ಎನ್‌. ತೆಂಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂಗ್ರೆಸ್‌ ಕಾರ್ಯಕರ್ತರು ಸೇರಿದಂತೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next