Advertisement

ಕಾನೂನು ಮೀರದಂತೆ ಮುಖಂಡರು ಎಚ್ಚರವಹಿಸಬೇಕು: ಎಸ್ ಪಿ ಆರ್.ಚೇತನ್

10:49 PM Nov 26, 2022 | Team Udayavani |

ಹುಣಸೂರು: ಡಿ.7 ರಂದು ನಡೆಯಲಿರುವ ಹನುಮ ಜಯಂತಿಯನ್ನು ಶಾಂತಿಯುತವಾಗಿ ಆಚರಿಸಲು ಎಲ್ಲ ಪಕ್ಷಗಳು, ಧರ್ಮ, ವಿವಿಧ ಸಮುದಾಯದ ಮುಖಂಡರು ಶಾಂತಿ ಸಭೆಯಲ್ಲಿ ಮನವಿ ಮಾಡಿದರು.

Advertisement

ನಗರದ ಅಂಬೇಡ್ಕರ್ ಭವನದಲ್ಲಿ ಪೊಲೀಸ್ ಇಲಾಖೆವತಿಯಿಂದ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಹನುಮಜಯಂತಿ ಸಮಿತಿ ಅಧ್ಯಕ್ಷ ವಿ.ಎನ್.ದಾಸ್ ಹನುಮಜಯಂತಿಯ ಸಿದ್ದತೆಗಳ ಕುರಿತು ಮಾಹಿತಿ ನೀಡಿದರು. ಸಮಿತಿಯ ಕಾನೂನು ಸಲಹೆಗಾರ ವಕೀಲ ಯೋಗಾನಂದಕುಮಾರ್ ಸಮಿತಿವತಿಯಿಂದ ಜಯಂತಿ ಆಚರಿಸುತ್ತಿದ್ದು, ಇದು ಚುನಾವಣಾ ವರ್ಷವಾಗಿದ್ದು ಜಯಂತಿಯಲ್ಲಿ ಯಾವುದೇ ರಾಜಕೀಯ ಬೆರೆಸದಂತೆ ಮನವಿ ಮಾಡಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಹಳ್ಳಿಸೋಮಶೇಖರ್, ಬಿಜೆಪಿ ತಾಲೂಕು ಅಧ್ಯಕ್ಷ ನಾಗಣ್ಣಗೌಡ, ನಗರಸಭಾ ಸದಸ್ಯ ಸೈಯದ್‌ಯೂನಸ್, ಮಾಜಿ ಸದಸ್ಯ ಮಜಾಜ್ ಅಹಮದ್, ಕಾಂಗ್ರೆಸ್ ಮುಖಂಡ ರಾಘುರವರು ಮಾತನಾಡಿ ಯಾವುದೇ ಹಬ್ಬವನ್ನು ಹಬ್ಬದಂತೆ ಆಚರಿಸಬೇಕು. ಯಾವುದೇ ಗೊಂದಲ ಬೇಡವೆಂದರೆ, ದಸಂಸದ ನಿಂಗರಾಜಮಲ್ಲಾಡಿ, ಡಿ.ಕುಮಾರ್‌ರವರು ಹಬ್ಬವನ್ನು ಜಾತ್ಯಾತೀತ, ಪಕ್ಷಾತೀತ, ಧರ್ಮಾತೀತವಾಗಿ ಆಚರಿಸಬೇಕು. ಪ್ರಚೋದನಾಕಾರಿ ಭಾಷಣಕ್ಕೆ ಅವಕಾಶ ನೀಡದೆ. ಶಾಂತಿ ಸೌಹಾರ್ದತೆಯನ್ನು ಕಾಪಾಡಬೇಕೆಂದು ಅಭಿಪ್ರಾಯಪಟ್ಟು, ಎಲ್ಲ ಧರ್ಮಗಳ ಮುಖಂಡರು ಮುಂದೆನಿಂತು ಯುವಕರನ್ನು ನಿಯಂತ್ರಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಪಿ.ಮಂಜುನಾಥ್ ವಕೀಲ ಯೋಗಾನಂದಕುಮಾರ್‌ರ ಸಲಹೆಯಂತೆ ಎಲ್ಲ ರಾಜಕೀಯ ಪಕ್ಷಗಳು ದೂರವಿದ್ದು, ಸಮಿತಿಯೇ ಮುಂದೆನಿಂತು ಜಯಂತಿ ಮೆರವಣಿಗೆ ನಡೆಸಬೇಕು. ಇದೊಂದು ಗಾಂಭೀರ್ಯ, ಭಾತೃತ್ವದ ಜಯಂತಿ ಆಗಲಿ, ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರವಹಿಸಬೇಕೆಂದು ಆಶಿಸಿದರು.ಉಪವಿಭಾಗಾಧಿಕಾರಿ ರುಚಿಬಿಂದಿಯಾ ಶಾಂತಿಯುತವಾಗಿ ಆಚರಿಸಲು ಎಲ್ಲರ ಸಹಕಾರ ಅತ್ಯಗತ್ಯವೆಂದರು.

ಎಸ್ಪಿ ಆರ್.ಚೇತನ್ ಮಾತನಾಡಿ, ಹಿಂದಿನ ಘಟನೆಗಳನ್ನು ಆಧರಿಸಿ ಪೊಲೀಸ್‌ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮವಹಿಸಲಿದೆ. ಎಲ್ಲವನ್ನು ಅನುಮತಿ ಪಡೆದೇ ಆಚರಿಸಬೇಕು. ಬದಲಾವಣೆಗಾಗಿ 24 ಗಂಟೆ ಮೊದಲು ಅನುಮತಿ ಕಡ್ಡಾಯ, ಶಾಂತಿ ಸುವ್ಯವಸ್ಥೆ ಕದಡುವವರ ಮೇಲೆ ಇಲಾಖೆ ನಿಗಾವಹಿಸಿದೆ. ನ್ಯಾಯಾಲಯದ ನಿರ್ದೇಶನದಂತೆ ಶಬ್ದಮಾಲಿನ್ಯ ಸೇರಿದಂತೆ ಎಲ್ಲದರ ಮೇಲೂ ನಿಯಂತ್ರಣಕ್ಕೆ ಕ್ರಮವಹಿಸಲಾಗುವುದು. ಸಾಮಾಜಿಕ ಜಾಲತಾಣದ ಬಗ್ಗೆ ಇಲಾಖೆ ನಿಗಾಇಟ್ಟಿದ್ದು, ಶಾಂತಿ ಕದಡುವ ಯಾವುದೇ ಪೋಸ್ಟ್ ಹಾಕಿದರೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು, ನಗರ ಪ್ರವೇಶಿಸುವ ಎಲ್ಲಾ ರಸ್ತೆಗಳಲ್ಲೂ ಚೆಕ್‌ಪೋಸ್ಟ್ ನಿರ್ಮಿಸಲಾಗುವುದು, ನಗರದ ಮೆರವಣಿಗೆ ತೆರಳುವ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ ಎಲ್ಲರೂ ಪೊಲೀಸರಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

Advertisement

ಸಭೆಯಲ್ಲಿ ತಹಸೀಲ್ದಾರ್ ಡಾ.ಅಶೋಕ್, ಡಿವೈಎಸ್‌ಪಿ ರವಿಪ್ರಸಾದ್, ನಗರಸಭೆ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಆಶಾ, ಸ್ಥಾಯಿಸಮಿತಿ ಅಧ್ಯಕ್ಷೆ ಶ್ವೇತಾ, ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ಪೌರಾಯುಕ್ತೆ ಮಾನಸ, ಇನ್ಸ್ಪೆಕ್ಟರ್‌ಗಳಾದ ಶ್ರೀನಿವಾಸ್, ರವಿ, ಜಯಂತಿ ಸಮಿತಿಯ ಎಚ್.ವೈ.ಮಹದೇವ್, ಚಂದ್ರಮೌಳಿ, ಅನಿಲ್, ಗಿರೀಶ್, ವಿವಿಧ ಸಂಘಸಂಸ್ಥೆ ಗಳ ಪ್ರತಿನಿಧಿಗಳು, ವಿವಿಧ ಧರ್ಮಗಳ ಮುಖಂಡರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವಾಹನ ಏರುವಂತಿಲ್ಲ
ಮೆರವಣಿಗೆಯಲ್ಲಿ ಯಾವುದೇ ಸಮಿತಿ, ಮುಖಂಡರು ವಾಹನ ಏರಿ ಬರುವಂತಿಲ್ಲ, ನ್ಯಾಯಾಲಯದ ಆದೇಶದಂತೆ ಡೆಸಿಬಲ್ ಆಧರಿಸಿ ಮೈಕ್, ಸೌಂಡ್ ಬಾಕ್ಸ್ ಗಳಿಗೆ ಮಾತ್ರ ಅವಕಾಶ ನೀಡಲಾಗುವುದುದೆಂದು ಸಭೆಯ ನಂತರ ಎಸ್ ಪಿ ಆರ್.ಚೇತನ್ ಉದಯವಾಣಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next