Advertisement

ಪಾನ ನಿಷೇಧ ರಿಯಾಯಿತಿ ಕೋರಲು ಕುಡುಕರ ಸಮ್ಮೇಳನ

08:22 PM Jan 19, 2022 | Team Udayavani |

ಪಾಟ್ನಾ: ಬಿಹಾರದಲ್ಲಿ ಜಾರಿಯಲ್ಲಿರುವ ಪಾನ ನಿಷೇಧದಲ್ಲಿ ರಿಯಾಯಿತಿ ನೀಡಬೇಕು ಎಂದು ಜೆಡಿಯು ಮುಖಂಡ ಶ್ಯಾಮ್‌ ಬಹದ್ದೂರ್‌ ಸಿಂಗ್‌ ಒತ್ತಾಯಿಸಿದ್ದಾರೆ.

Advertisement

ಸಿಎಂ ನಿತೀಶ್‌ ಕುಮಾರ್‌ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಸಿವಾನ್‌ನಲ್ಲಿರುವ ಗಾಂಧಿ ಮೈದಾನದಲ್ಲಿ ಕುಡುಕರ ಸಮ್ಮೇಳನ ಆಯೋಜಿಸಲು ಚಿಂತನೆ ನಡೆಸುತ್ತಿರುವುದಾಗಿಯೂ ಘೋಷಿಸಿದ್ದಾರೆ.

ಸಿಎಂ ನಿತೀಶ್‌ ಅವರೇನು ಕಾನೂನಿಗಿಂತ ದೊಡ್ಡವರೇ? ಕೋರ್ಟ್‌ ಕೂಡ ಪಾನ ನಿಷೇಧ ಕ್ರಮದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದೆ.

ಇದನ್ನೂ ಓದಿ:ಮೆಟ್ರಿಕ್ ನಂತರ : ವಿದ್ಯಾರ್ಥಿನಿಲಯಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಹೀಗಾಗಿ, ನಿಯಮದಲ್ಲಿ ರಿಯಾಯಿತಿ ತೋರಿಸಬೇಕು ಎಂದು ಒತ್ತಾಯಿಸಿದ್ದಾರೆ. ಕುಡುಕರ ಸಮ್ಮೇಳನಕ್ಕೆ ಬರುವವರಿಗೆ ಮದ್ಯದ ಪೂರೈಕೆ ಮಾಡುವ ವಾಗ್ಧಾನವನ್ನೂ ಮಾಡಿದ್ದಾರೆ ಶ್ಯಾಮ್‌ ಬಹದ್ದೂರ್‌.

Advertisement

ಬಿಹಾರದಲ್ಲಿ ಮದ್ಯದ ಬಳಕೆ, ಉತ್ಪಾದನೆ ಮತ್ತು ಸಂಗ್ರಹದ ಮೇಲೆ ನಿಷೇಧ ಹೇರಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next