Advertisement

ಎಲ್‌.ಡಿ.ಎಫ್‌. ಅಭ್ಯರ್ಥಿ ಕೆ.ಪಿ. ಸತೀಶ್‌ ಚಂದ್ರನ್‌ ನಾಮಪತ್ರ ಸಲ್ಲಿಕೆ

07:12 PM Mar 29, 2019 | Vishnu Das |

ಕಾಸರಗೋಡು: ಎಲ್‌.ಡಿ.ಎಫ್‌. ಅಭ್ಯರ್ಥಿ ಕೆ.ಪಿ. ಸತೀಶ್‌ ಚಂದ್ರನ್‌ ನಾಮಪತ್ರ ಸಲ್ಲಿಕೆ ಬದಿಯಡ್ಕ: ಕಾಸರಗೋಡು ಲೋಕಸಭೆ ಕ್ಷೇತ್ರದ ಎಲ್‌.ಡಿ.ಎಫ್‌. ಅಭ್ಯರ್ಥಿ ಕೆ.ಪಿ. ಸತೀಶ್‌ ಚಂದ್ರನ್‌ ಇಂದು ನಾಮಪತ್ರ ಸಲ್ಲಿಸಿದರು. ಬೆಳಗ್ಗೆ 10.30 ಕ್ಕೆ ಮುಖ್ಯ ಚುನಾವಣಾಧಿಕಾರಿಯಾದ ಡಾ.ಡಿ.ಸಜಿತ್‌ ಬಾಬು ಅವರಿಗೆ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮುನ್ನ ಸಿ.ಪಿ.ಎಂ. ಕಾಸರಗೋಡು ಜಿಲ್ಲಾ ಸಮಿತಿ ಕಚೇರಿಯಿಂದ ಮೆರವಣಿಗೆ ನಡೆಸಲಾಯಿತು. ಕೇರಳದಲ್ಲಿ ಲೋಕಸಭೆ ಚುನಾವಣೆ ಸಂಬಂಧ ಅಭ್ಯರ್ಥಿಗಳ ನಾಮಪತ್ರಿಕೆ ಸಲ್ಲಿಕೆ ಆರಂಭಗೊಂಡಿದ್ದು , ಇದುವರೆಗೂ ಯಾರು ನಾಮಪತ್ರ ಸಲ್ಲಿಸಿರಲಿಲ್ಲ.

Advertisement

ಏ.4 ರ ತನಕ ನಾಮಪತ್ರ ಸಲ್ಲಿಸಬಹುದಾಗಿದೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು. ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಅವರಿಗೆ, ಅವರ ಅನುಪಸ್ಥಿತಿಯಲ್ಲಿ ಸಹಾಯಕ ಚುನಾವಣಾಧಿಕಾರಿಗೆ ಸಲ್ಲಿಸಬಹುದುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next