Advertisement

ಭಾರಿ ಗಾಳಿ ಮಳೆಯಿಂದ ಶರಾವತಿ ಹಿನ್ನೀರಿನ ಮಧ್ಯದಲ್ಲಿ ಸಿಕ್ಕಿಬಿದ್ದಿರುವ ಲಾಂಚ್!

03:52 PM Aug 06, 2020 | keerthan |

ಶಿವಮೊಗ್ಗ: ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಹುಲಿದೇವರ ಬನದ ಬಳಿಯ ಹಿನ್ನೀರಿನಲ್ಲಿ ಲಾಂಚ್ ಒಂದು ಗಾಳಿ ಮಳೆಯ ಕಾರಣದಿಂದ ನೀರಿನ ನಡುವೆ ಸಿಲುಕಿ ಕೊಂಡಿದೆ.

Advertisement

ಸಾಗರ ತಾಲೂಕಿನ ಹುಲಿದೇವರ ಬನದ ಹಿನ್ನೀರಿನಲ್ಲಿ ಲಾಂಚ್ ಒಂದು ಜನರನ್ನು ಮತ್ತು ವಾಹನಗಳನ್ನು ಹೇರಿಕೊಂಡು ಹೊಸನಗರ ತಾಲೂಕಿನ ಕೆ.ಬಿ.ಕ್ರಾಸ್ ಸಮೀಪಕ್ಕೆ ಹೊರಟಿತ್ತು. ಆದರೆ ಭಾರಿ ಗಾಳಿ ಮಳೆಯ ಕಾರಣದಿಂದ ದಡಕ್ಕೆ ಬರಲು ಸಾಧ್ಯವಾಗದೆ ನೀರಿನ ನಡುವೆ ಸಿಲುಕಿಕೊಂಡಿದೆ.

ಲಾಂಚ್ ನಲ್ಲಿ ಕಾರುಗಳು, ಸಿಲಿಂಡರ್ ಲಾರಿ ಹಾಗೂ ಐವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದಾರೆ.

ತೆಪ್ಪದ ಮೂಲಕ ಲಾಂಚ್ ಬಳಿ ತೆರಳಿ ಲಾಂಚ್ ಗೆ ಹಗ್ಗಕಟ್ಟಿ ದಡಕ್ಕೆ ತರಲು ಪ್ರಯತ್ನ ನಡೆಸಲಾಗುತ್ತಿದೆ. ಈ ಪ್ರಯತ್ನ ಯಶಸ್ವಿಯಾಗದಿದ್ದಲ್ಲಿ ಕ್ರೇನ್ ತರಿಸಿ ಲಾಂಚ್ ದಡಕ್ಕೆ ಎಳೆಯಲು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next