Advertisement

ಮೊಬೈಲ್‌ ಫೀವರ್‌ ಕ್ಲಿನಿಕ್‌ ಬಸ್‌ಗೆ ಚಾಲನೆ

08:12 AM May 19, 2020 | Lakshmi GovindaRaj |

ತುಮಕೂರು: ಜಿಲ್ಲೆಯಲ್ಲಿ ಕೋವಿಡ್‌-19 ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಸಾರ್ವಜನಿಕರ ಉಪಯೋಗ ಕ್ಕಾಗಿ ತುಮಕೂರು ಕೆಎಸ್‌ಆರ್‌ಟಿಸಿ ನಿರ್ಮಿಸಿರುವ ಮೊಬೈಲ್‌ ಫೀವರ್‌ ಕ್ಲಿನಿಕ್‌ ಬಸ್‌ಗೆ ಶಾಸಕ ಜಿ.ಬಿ. ಜ್ಯೋತಿ  ಗಣೇಶ್‌ ಸೋಮವಾರ ಚಾಲನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಚಾಲನೆ ನೀಡಿ ಮಾತನಾಡಿ, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಕೆಎಸ್‌ಆರ್‌ಟಿಸಿ ಕೋವಿಡ್‌-19 ತಪಾಸಣೆಗೊಳ್ಳಲು ಬಸ್ಸನ್ನು ಮಾರ್ಪಾಡು ಮಾಡಿ, ಮೊಬೈಲ್‌ ಫೀವರ್‌ ಕ್ಲಿನಿಕ್‌ ತೆರೆಯಲಾಗಿದೆ.

Advertisement

ನಗರ ಮತ್ತು ಗ್ರಾಮೀಣ ಭಾಗದಿಂದ ತಪಾಸಣೆಗಾಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಅನವಶ್ಯಕ ಒಡಾಟವನ್ನು ತಪ್ಪಿಸಬಹುದು. ಅವಶ್ಯಕತೆ ಇರುವ ಕಡೆ ಮೊಬೈಲ್‌  ಫೀವರ್‌ ಕ್ಲಿನಿಕ್‌ ಬಸ್‌ನಲ್ಲಿಯೇ ಗಂಟಲು ದ್ರವ ಮಾದರಿ ತೆಗೆದುಕೊಳ್ಳಬಹುದಾಗಿದೆ ಎಂದರು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್‌ ಮಾತನಾಡಿ, ಜಿಲ್ಲೆ ಯಲ್ಲಿ ಅವಶ್ಯಕತೆ ಇರುವ ಕಡೆ ರ್‍ಯಾಂಡಮ್‌ ಆಗಿ ಪರೀಕ್ಷೆ ಮಾಡಲು ಜನರ  ಗಂಟಲು ದ್ರವ ಮಾದರಿಯನ್ನು ಪಡೆಯ ಬಹುದು. ಅಲ್ಲದೇ ಸಾರ್ವಜನಿಕರಿಗೆ ವೈದ್ಯಕೀಯ ಪರೀಕ್ಷೆ ಮಾಡಲು ಸಹ ಇದು ಉಪಯೋಗ ವಾಗುತ್ತದೆ.

ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಡಿಎಚ್‌ಒ ಡಾ.ನಾಗೇಂದ್ರಪ್ಪ ಮಾತನಾಡಿ, ಜನಸಂದಣಿ ಹೆಚ್ಚಿರುವ ಸ್ಥಳಕ್ಕೆ ಮೊಬೈಲ್‌ ಫೀವರ್‌ ಕ್ಲಿನಿಕ್‌ ಬಸ್‌ ತೆಗೆದು ಕೊಂಡು ಹೋಗಿ ಅವಶ್ಯಕವಿರುವವರ ಗಂಟಲು ದ್ರವವನ್ನು ಪರೀಕ್ಷೆ ಮಾಡಲು ವ್ಯವಸ್ಥೆ ಮಾಡಿದ್ದು, ಆರೋಗ್ಯ ಇಲಾಖೆಯಿಂದ ಈಗಾಗಲೇ ಬಸ್‌ ಕಾರ್ಯ ನಿರ್ವಹಿಸುತ್ತಿತ್ತು. ಅದರ ಜೊತೆಗೆ ಕೆಎಸ್‌ಆರ್‌ಟಿಸಿ ವತಿಯಿಂದ ಒಂದು ಬಸ್‌ ಕಾರ್ಯನಿರ್ವಹಿಸುತ್ತದೆ ಎಂದರು.

ಸೌಲಭ್ಯಗಳು: ವೈದ್ಯರ ಕ್ಯಾಬಿನ್‌, ನರ್ಸ್‌ ಕ್ಯಾಬಿನ್‌, ರೋಗಿಗಳ ತಪಾಸಣೆಗಾಗಿ ಪ್ರತ್ಯೇಕ ಡಯಾಗ್ನೊಸಿಂಗ್‌ ಘಟಕ, ಸ್ವಾಬ್‌ ಸ್ಯಾಂಪಲ್‌ ಕಲೇಕ್ಷನ್‌ಗಾಗಿ ಪ್ರತ್ಯೇಕ ಕ್ಯಾಬಿನ್‌, ಸ್ಯಾನಿಟೈಜರ್‌ ಯುನಿಟ್‌, ರೋಗಿಗಳಿಗಾಗಿ ಆಸನಗಳು, ವಾಶ್‌  ಬೇಸಿನ್‌, ಪ್ಯಾನ್‌ ಗಳು, ಬೆಳಕಿನ ವ್ಯವಸ್ಥೆ, ವಾಹನದ ಹೊರ ಕವಚದ ಮೇಲೆ ಕೋವಿಡ್‌-19 ಸಂಬಂಧಿಸಿದಂತೆ ಮಾಹಿತಿ ಹಾಗೂ ವಹಿಸ ಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಫ್ಲೆಕ್ಸ್‌ ಅಳವಡಿಸಲಾಗಿರು ತ್ತದೆ. ಅಪರ ಜಿಲ್ಲಾಧಿಕಾರಿ  ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವೀರಭದ್ರಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next