Advertisement

ಬಾರೋ ಸಾಧಕರ ಕೇರಿಗೆ: ಕಡೆಯ ಕೋರಿಕೆ

06:37 PM Sep 29, 2020 | Suhan S |

ಕವಿಗಳು, ಲೇಖಕರು ಜಗತ್ತಿಗೆ ಹೆದರದಿದ್ದರೂ ತಂತಮ್ಮ ಹೆಂಡತಿಯರಿಗೆ ಹೆದರುತ್ತಾರೆ ಎಂಬ ಮಾತೊಂದಿದೆ. ಪ್ರತಿಯೊಬ್ಬ ಸಾಧಕನ ಬೆನ್ನ ಹಿಂದೆ ಒಬ್ಬಳು ಹೆಂಗಸಿರುತ್ತಾಳೆ ಎಂಬ ಗಾದೆ ಆ ಮಾತನ್ನು ತಿರುಚಿ, ಆದರೆ ಆಕೆ ಹೆಂಡತಿಯಲ್ಲ ಎಂಬ ಮಾತು ಹೇಳಿ ನಕ್ಕವರೂ ಇದ್ದಾರೆ.

Advertisement

ಸ್ಯಾಮುಯೆಲ್‌ ಬಟ್ಲರ್‌, ಹತ್ತೂಂಬತ್ತನೇ ಶತಮಾನದ ಪ್ರಸಿದ್ಧ ಇಂಗ್ಲಿಷ್‌ ಸಾಹಿತಿ. ಈತ ಹೋಮರನಕಾವ್ಯವನ್ನು ಇಂಗ್ಲಿಷಿಗೆ ಭಾಷಾಂತರಿಸಿದ. “ದ ವೇ ಆಫ್ ಆಲ್‌ ಫ್ಲೆಶ್‌’ ಆತ್ಮಕಥಾನಕದ ರೂಪದಲ್ಲಿರುವ ಇವನ ಪ್ರಸಿದ್ಧಕಾದಂಬರಿ. ಬಟ್ಲರ್‌, ಹಾಸಿಗೆ ಹಿಡಿದಿದ್ದ ತನ್ನ ಪತ್ನಿಯ ಪಕ್ಕದಲ್ಲಿ ಕೂತಿದ್ದನಂತೆ. ಆಕೆಯ ಜೀವನ ಮುಗಿಯಿತು ಎಂಬುದು ಅವನಿಗೆ ಖಚಿತವಾಗಿತ್ತು. ಆಕೆಯಕೈಯನ್ನು ಹಿಡಿದು ನೇವರಿಸುತ್ತಕೇಳಿದ- ನೀನು ಜನ್ಮಾಂತರವನ್ನು ನಂಬ್ತೀಯಾ?. ಆಕೆ ಹೌದೆಂಬಂತೆ ತಲೆಯಾಡಿಸಿದಳು. ಎಲ್ರೂ ಹೇಳ್ತಾರೆ, ಸತ್ತವರ ಆತ್ಮಗಳು ಅವರ ಕುಟುಂಬದವರ ಸುತ್ತ ತಿರುಗಾಡ್ತವೆ ಅಂತ. ಬದುಕಿರುವ ತಮ್ಮ ಪ್ರೀತಿಪಾತ್ರರ ಜೊತೆ ಮಾತಾಡುವುದಕ್ಕೆ ಪ್ರಯತ್ನಪಡ್ತವೆ ಅಂತ ಎಂದ ಬಟ್ಲರ್‌. ಆಕೆ ಅದೂ ನಿಜ ಎಂಬಂತೆ ಕ್ಷೀಣವಾಗಿ ಹೂಂಗುಟ್ಟಿದಳು.

ಅಂಥ ಸಾಧ್ಯತೆಗಳು ಏನಾದರೂ ಇದ್ದರೆ ನೀನು ನನ್ನ ಜೊತೆ ಮಾತಾಡೋದಕ್ಕೆ ಪ್ರಯತ್ನ ಪಡ್ತೀಯಾ ಅನ್ನೋದು ನನಗೆ ಗೊತ್ತು. ಆ ಲೋಕದಲ್ಲಿ ಅದ್ಯಾವುದೋ ಒಂದು ಸಿದ್ಧಿಯಿಂದ ನಿನಗೆ ಭೂಲೋಕದ ಮೇಲಿರುವ ಜನರ ಹತ್ತಿರ ಮಾತಾಡುವುದಕ್ಕೆ ಸಾಧ್ಯವಾಯಿತು ಅಂತ ಇಟ್ಟುಕೋ… ಸಂದೇಶಕಳಿಸೋದಕ್ಕೆ ಸಾಧ್ಯವಾಯಿತು ಅಂತ ಇಟ್ಟುಕೋ. ಹಾಗೇನಾದರೂ ಆದರೆ… ಬಟ್ಲರ್‌ ಧ್ವನಿ ಕ್ಷಣಕಾಲ ನಿಂತಿತು. ಆದರೆ..?, ಆಕೆ ಪ್ರಶ್ನಾರ್ಥಕವಾಗಿ ಅವನ ಮುಖ ನೋಡಿದಳು. ಹಾಗೇನಾದರೂ ಆದರೆ ನೀನು ದಯವಿಟ್ಟು ನನ್ನನ್ನ ಸಂಪರ್ಕಿಸೋದಕ್ಕೆ ಮಾತ್ರ ಪ್ರಯತ್ನಿಸಬೇಡ!,ಕಡ್ಡಿ ಮುರಿದಂತೆ ಹೇಳಿಬಿಟ್ಟ ಬಟ್ಲರ್‌!

ಅವನ ದುರ್ದೈವ! ಆಕೆ ಸಾಯಲಿಲ್ಲ. ಬದುಕುಳಿದಳು. ಆರೋಗ್ಯವಂತಳಾದಳು. ಆತನ ಆ ಮಾತುಗಳನ್ನು ಮಾತ್ರ ಆಕೆ ಜೀವಮಾನದುದ್ದಕ್ಕೂ ಮರೆಯಲಿಲ್ಲವಂತೆ! ­

Advertisement

Udayavani is now on Telegram. Click here to join our channel and stay updated with the latest news.

Next