Advertisement

ಭಾರಿ ಮಳೆ: ಮಂಗಳೂರು ವಿ.ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮರವೂರು ಸೇತುವೆ ಬಳಿ ಬಿರುಕು

10:23 AM Jun 30, 2022 | Team Udayavani |

ಬಜಪೆ: ಕಳೆದ ಮಳೆಗಾಲಕ್ಕೆ ಬಿರುಕು ಕಾಣಿಸಿಕೊಂಡಿದ್ದ ಮರವೂರು ಸೇತುವೆಯ ಬಳಿ ಕುಸಿತವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

Advertisement

ಸೇತುವೆ ಮತ್ತು ರಸ್ತೆಗೆ ಸಂಪರ್ಕ ಕಲ್ಪಿಸುವ ಜಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಜಪೆ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಬರುವ ರಸ್ತೆಯ ಬಲ ಬದಿಯಲ್ಲಿ ಮಣ್ಣು ಕುಸಿತವಾಗಿದೆ.

ಇದನ್ನೂ ಓದಿ:ಮಂಗಳೂರು: ಮಳೆ ಹೆಚ್ಚಿದ್ದಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

ಹೀಗಾಗಿ ಒಂದು ಬದಲಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬಿರುಕು ಬಿದ್ದ ಜಾಗದಲ್ಲಿ ಮಣ್ಣು ಹಾಕುವ ಕೆಲಸ ನಡೆಯುತ್ತಿದೆ.

Advertisement

ಗುಡ್ಡ ಕುಸಿತ: ಇಲ್ಲಿಗೆ ಸಮೀಪದ ಕೆಂಜಾರು ಶ್ರೀ ದೇವಿ ಕಾಲೇಜು ಬಳಿ ಗುಡ್ಡ ಕುಸಿತವಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದೆ. ಮಂಗಳೂರಿನ ಪಡೀಲ್ ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಂಡಿದೆ.

ರಜೆ ಘೋಷಣೆ: ಭಾರೀ ಮಳೆಯ ಕಾರಣದಿಂದ ಪಿಯುಸಿ ಮತ್ತು ಡಿಗ್ರಿ ಕಾಲೇಜುಗಳಿಗೆ ಜಿಲ್ಲಾಧಿಕಾರಿಯವರು ರಜೆ ಘೋಷಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next