Advertisement

ಮಂಗಳೂರು: ಭಾರಿ ಮಳೆಗೆ ಹಳಿ ಮೇಲೆ ಮಣ್ಣು ಕುಸಿತ ; ರೈಲುಗಳು ರದ್ದು

02:40 PM Jun 30, 2022 | Team Udayavani |

ಮಂಗಳೂರು : ಕರಾವಳಿಯಲ್ಲಿ ಬುಧವಾರ ಸಂಜೆಯಿಂದ ಭಾರಿ ಮಳೆ ಸುರಿಯುತ್ತಿದ್ದು, ರೈಲು ಸಂಚಾರದ ಮೇಲೂ ಪರಿಣಾಮ ಬೀರಿದೆ.

Advertisement

ಪಡೀಲ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಗುರುವಾರ ಬೆಳಗ್ಗೆ ಹಳಿಗಳ ಮೇಲೆ ಮಣ್ಣು ಕುಸಿತ ಉಂಟಾಗಿದ್ದು, ಜೂನ್ 30ರಂದು ಸುಬ್ರಹ್ಮಣ್ಯ ರಸ್ತೆ – ಮಂಗಳೂರು ಸೆಂಟ್ರಲ್ ಅನ್ ರಿಸರ್ವ್ಡ್ ಎಕ್ಸ್‌ಪ್ರೆಸ್ ವಿಶೇಷ ಸೇವೆ(ರೈಲು ಸಂಖ್ಯೆ06488) ಮತ್ತು ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರಸ್ತೆ ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷ ಸೇವೆ(ರೈಲು ಸಂಖ್ಯೆ 06489) ರದ್ದುಗೊಳಿಸಲಾಗಿದೆ.

ಬುಧವಾರ ವಿಜಯಪುರದಿಂದ ಹೊರಟಿದ್ದ ರೈಲು ಸಂಖ್ಯೆ.07377 ವಿಜಯಪುರ-ಮಂಗಳೂರು ಜಂಕ್ಷನ್ ದೈನಂದಿನ ವಿಶೇಷ ಸೇವೆ ಬಂಟ್ವಾಳದಲ್ಲಿ ಕೊನೆಗೊಳ್ಳಲಿದೆ.

ಸಂಜೆಯ ವೇಳೆಗೆ ಹಳಿಯಲ್ಲಿ ಪುನಃ ರೈಲುಗಳ ಸಂಚಾರವನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next