Advertisement

ಶಾಲಾ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

04:55 PM May 17, 2022 | Team Udayavani |

ನಾಗರಹಾಳ: ಸಮೀಪದ ತುಂಬಲಗಡ್ಡಿ, ಬಯ್ನಾಪೂರ, ಖೈರವಾಡಗಿ ಗ್ರಾಮಗಳಲ್ಲಿ ಶಾಲಾ ಕಟ್ಟಡ ಕಾಮಗಾರಿಗಳಿಗೆ ಲಿಂಗಸುಗೂರು ಶಾಸಕ ಡಿ.ಎಸ್‌. ಹೂಲಗೇರಿ ಹಾಗೂ ವಿಧಾನ ಪರಿಷತ್‌ ಸದಸ್ಯ ಶರಣಗೌಡ ಪಾಟೀಲ್‌ ಬಯ್ನಾಪೂರ ಸೋಮವಾರ ಭೂಮಿಪೂಜೆ ನೆರವೇರಿಸಿದರು.

Advertisement

ನಂತರ ಶಾಸಕ ಡಿ.ಎಸ್‌. ಹೂಲಗೇರಿ ಮಾತನಾಡಿ, 2021-22ನೇ ಸಾಲಿನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ತುಂಬಲಗಡ್ಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 5 ಕೊಠಡಿಗಳ ನಿರ್ಮಾಣಕ್ಕೆ 55 ಲಕ್ಷ ರೂ., ಬಯ್ನಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ 33 ಲಕ್ಷ ರೂ., ಖೈರವಾಡಗಿ ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ 2 ಕೋಟಿ ರೂ. ಗಳ ವೆಚ್ಚದ ಅನುದಾನ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್‌ ಅಧ್ಯಕ್ಷ ಮಹಾಂತೇಶ ಪಾಟೀಲ್‌, ಬಿಜೆಪಿ ಮುಖಂಡ ಕಂಠೇಪ್ಪಗೌಡ ಮಾಲೀಪಾಟೀಲ್‌, ಮುದಗಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಾವೂದ್‌ ಸಾಬ, ಖೈರವಾಡಗಿ ಗ್ರಾಪಂ ಅಧ್ಯಕ್ಷೆ ವಿಷ್ಣುದೇವಿ, ಉಪಾಧ್ಯಕ್ಷೆ ಮಂಜುಳಾ, ಗ್ರಾಪಂ ಸದಸ್ಯ ಶರಣಬಸವ ಮುರಾಳ, ಬಿಜೆಪಿ ಮುಖಂಡ ವೆಂಕಟೇಶ ನಾಯಕ, ಶಂಕ್ರಪ್ಪ ಸಾಹುಕಾರ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next