Advertisement

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿಧೇಯಕ ಮಂಡನೆ

11:22 PM Mar 02, 2020 | Lakshmi GovindaRaj |

ವಿಧಾನಸಭೆ: ಕೈಗಾರಿಕೆಗಳಿಗೆ ಸರ್ಕಾರ ನೀಡಿರುವ ಜಮೀನನ್ನು ಏಳು ವರ್ಷ ಬಳಕೆ ಮಾಡಲಾಗದೇ ಅಥವಾ ಉದ್ಯಮ ನಿಭಾಯಿಸಲಾಗದಿದ್ದರೆ, ಏಳು ವರ್ಷಗಳ ನಂತರ ಅದೇ ಉದ್ದೇಶಕ್ಕೆ ಜಮೀನು ಮಾರಾಟ ಮಾಡಲು ಕೈಗಾರಿಕೋದ್ಯಮಿಗಳಿಗೆ ಅವಕಾಶ ಕಲ್ಪಿಸುವ ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ 2020 ವಿಧೇಯಕವನ್ನು ವಿಧಾನ ಸಭೆಯಲ್ಲಿ ಮಂಡಿಸಲಾಯಿತು. ಪ್ರತಿಪಕ್ಷಗಳ ಗದ್ದಲದ ನಡುವೆಯೇ ಕಂದಾಯ ಸಚಿವ ಆರ್‌. ಅಶೋಕ್‌ ವಿಧಾನ ಸಭೆಯಲ್ಲಿ ವಿಧೇಯಕ ಮಂಡನೆ ಮಾಡಿದರು.

Advertisement

ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ಪ್ರಕರಣ 109ಕ್ಕೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದ್ದು, ಈ ತಿದ್ದುಪಡಿ ಪ್ರಕಾರ ಯಾವುದೇ ವ್ಯಕ್ತಿ ಉದ್ಯಮ ಸ್ಥಾಪನೆಗೆ ಸರ್ಕಾರದಿಂದ ಜಮೀನು ಪಡೆದು ಏಳು ವರ್ಷಗಳಲ್ಲಿ ಉದ್ಯಮ ಸ್ಥಾಪನೆ ಮಾಡಿ ಅದನ್ನು ನಿಭಾಯಿಸಲಾಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಅಥವಾ ನಿರ್ದಿಷ್ಟ ಉದ್ದೇಶಕ್ಕೆ ಬಳಕೆ ಮಾಡಲಾಗದೆ ಹಾಗೆಯೇ ಉಳಿಸಿಕೊಂಡಿದ್ದರೆ, ಅಂತಹ ಜಮೀನನ್ನು ಸಂಬಂಧ ಪಟ್ಟ ಉದ್ಯಮಿ ಏಳು ವರ್ಷದ ನಂತರ ಸರ್ಕಾರದ ಅನುಮತಿ ಪಡೆದು ತಾವು ಯಾವ ಉದ್ದೇಶಕ್ಕೆ ಜಮೀನು ಪಡೆದುಕೊಂಡಿದ್ದರೋ ಅದೇ ಉದ್ದೇಶಕ್ಕೆ ಬೇರೊಬ್ಬರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲು ತಿದ್ದುಪಡಿ ತರಲು ಸರ್ಕಾರ ವಿಧೇಯಕ ಮಂಡಿಸಿದೆ.

ಉದ್ಯಮಿಯು ಜಮೀನು ಮಾರಾಟಕ್ಕೆ ಅರ್ಜಿ ಸಲ್ಲಿಸಿದ ನಂತರ ಸಂಬಂಧ ಪಟ್ಟ ಅರ್ಜಿಯನ್ನು ಕರ್ನಾಟಕ ಕೈಗಾರಿಕೆ (ಸೌಲಭ್ಯ) ಅಧಿನಿಯಮ 2002 ರ ಅಡಿಯಲ್ಲಿ ರಚಿಸ ಲಾದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅಥವಾ ರಾಜ್ಯಮಟ್ಟದ ಏಕ ಗವಾಕ್ಷಿ ಒಪ್ಪಿಗೆ ನೀಡಿಕೆ ಸಮಿತಿಯ ಅನುಮೋದನೆ ಯೊಂದಿಗೆ ಸರ್ಕಾರ ಭೂಮಿಯನ್ನು ಮಾರಾಟಗೊಳಿಸಲು ವಿನಾಯಿತಿ ನೀಡುತ್ತದೆ.

ಉನ್ನತ ಮಟ್ಟದ ಸಮಿತಿಯ ಒಪ್ಪಿಗೆ ಪಡೆದ ನಂತರ ಕೈಗಾರಿಕೋದ್ಯಮಿಯು ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯನ್ವಯ 109 ನೇ ಕಲಂ ಅಡಿ ವಿನಾಯಿತಿಯನ್ನು ಪಡೆದ ಭೂಮಿಯನ್ನು ಯಾವ ಉದ್ದೇಶಕ್ಕೆ ಬಳಸಲು ಅನುಮತಿ ಪಡೆದುಕೊಂಡಿರುತ್ತಾರೆಯೋ ಅದೇ ಉದ್ದೇಶಕ್ಕೆ ಬಳಸಲು ಬೇರೆ ಕಂಪನಿ ಅಥವಾ ಸಂಸ್ಥೆಗೆ ಮಾರಾಟ ಮಾಡಲು ಅವಕಾಶ ದೊರೆ ಯುತ್ತದೆ. ಈ ವಿಧೇಯಕವನ್ನು 2019 ರ ನವೆಂ ಬರ್‌ 20 ರಿಂದಲೇ ಜಾರಿಗೆ ಬಂದಿದೆ ಎಂದು ಪರಿಗಣಿಸುವಂತೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next